ಕುಮಟಾ:
ಫ್ರೆಂಡ್ಸ ಕ್ಲಬ್ ಕತಗಾಲ, ಕುಮಟಾ ಇವರ ಆಶ್ರ್ರಯದಲ್ಲಿ ವಾಳ್ಕೇಸ್ ಟ್ರೋಫಿ ಕಾರ್ಯಕ್ರಮವು ಕತಗಾಲದ ಎಸ್.ಕೆ.ಪಿ. ಹೈಸ್ಕೂಲ ಮೈದಾನದಲ್ಲಿ ನಡೆದಿದ್ದು ಇದರ ಉದ್ಘಾಟನೆಯನ್ನು ಮಾದೇವ ಜಿ. ಅಂಬಿಗ, ಪ್ರಧಾನ ಅರ್ಚಕರು, ಯಕ್ಷ ಚೌಡೇಶ್ವರಿ ದೇವಾಲಯ, ನೀಲಗೋಡು ಇವರು ಮಾಡಿದರು. ಮಾಜಿ ಶಾಸಕ ದಿನಕರ ಕೆ. ಶೆಟ್ಟಿ ಕ್ರೀಡಾ ಧ್ವಜರೋಹಣ ನೆರವೇರಿಸಿ ಮಾತನಾಡುತ್ತಾ ಅಂತ್ಯಂತ ಅದ್ಧೂರಿಯಾಗಿ ನಡೆಯುತ್ತಿರುವ ಈ ವಾಲಿಬಾಲ್ ಟ್ರೋಫಿ ಈ ವಿಭಾಗದಲ್ಲಿ ಪ್ರಥಮ ಮತ್ತು ಇಂಥ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಹೊರಹೊಮ್ಮಲೆಂದು ಆಶಿಸಿದರು.
ಸಮಾರಂಭದದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಡಿ.ಎಫ್.ಓ. ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರು ನಾಗರಾಜ ನಾಯಕ ಮಾತನಾಡುತ್ತಾ ನಾನು ಕೆ.ಎಸ್.ಸಿ. ಎ. ಬೆಂಗಳೂರಿನಲ್ಲಿ, ಲಂಡನ್ನಿನ ಲಾಡ್ರ್ಸ ಮೈದಾನದಲ್ಲಿ ಹಾಗೂ ದೇಶದ ಅನೇಕ ಕಡೆಗಳಲ್ಲಿ ಪಂದ್ಯಾವಳಿಗಳನ್ನು ನೋಡಿದ್ದರೂ ಸಹ ಇಲ್ಲಿನ ಮುಖ್ಯವಾಗಿ ಹಿಂದುಳಿವರೇ ತುಂಬಿರುವ ಕತಗಾಲಿನ ಇಂತಹ ಅದ್ಧೂರಿಯಾದ ಅಂತರರಾಜ್ಯ ಮಟ್ಟದ ವಾಲಿಬಾಲ್ ಪಂದ್ಯ ನಡೆಸುತ್ತಿರುವುದು ಗಮನಾರ್ಹ ಮತ್ತು ಶ್ಲಾಘನೀಯ. ಇಂತಹ ಹಳ್ಳಿಗಳಿಗೆ ಅಂತರ ರಾಜ್ಯ ಮಟ್ಟದ ಆಟಗಾರರ ಪರಿಚಯ, ಅವರ ಆಟದ ವೈಖರಿ, ವಾಲಿಬಾಲ್ ಆಟದ ಬಗೆಗಿನ ಹೆಚ್ಚಿನ ತಿಳುವಳಿಕೆಗಳನ್ನು ಪರಿಚಯಿಸುವಲ್ಲಿ ಪ್ರೆಂಡ್ಸ ಕ್ಲಬ್ ಕತಗಾಲ ಯಶಸ್ವಿಯಾಗಿದೆ. ಇಂತಹ ಕ್ರೀಡೆಗಳು ಹೆಚ್ಚು ಹೆಚ್ಚು ನಡೆದಲ್ಲಿ ಈ ಭಾಗದ ಯುವ ಕ್ರೀಡಾ ಪಟುಗಳಿಗೂ ಹೆಚ್ಚಿನ ಉಪಯೋಗವಾಗಲಿದ್ದು ಕ್ರೀಡೆಯು ಕ್ರೀಡಾ ಮನೋಭಾವದಿಂದ ನಡೆದು ಯಶಸ್ಸು ಕಾಣಲೆಂದು ಹಾರೈಸಿದರು.
ಈ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯರು ಗಜಾನನ ಎನ್ ಪೈ, ಜಿಲ್ಲಾ ಪಂಚಾಯತ ಸದಸ್ಯರು ಹೊನ್ನಪ್ಪ ನಾಯಕ, ಉದ್ದಿಮೆದಾರರು ಮನೀಷ ನಾಯಕ, ಹಿರಿಯ ವ್ಯವಸ್ಥಾಪಕರು, ವಿಜಯ ಬ್ಯಾಂಕ್ ಮಂಜುನಾಥ ಎಸ್ ಭಟ್ಟ, ರಾಮನಾಥ ಶಾನಭಾಗ ಇನ್ನಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 2015-16ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆಗೈದ
ಕುಮಾರಿ ಶಿಲ್ಪಾ ರಾಮಚಂದ್ರ ನಾಯ್ಕ -92.16%,
ಕುಮಾರಿ ಪ್ರಜ್ಞಾ ಶಿವರಾಮ ಭಟ್ಟ -90.40%
ಕುಮಾರ ಸಂದೀಪ ಗಜಾನನ ಭಂಡಾರಿ -90.24% ಇವರನ್ನು ಹಾಗೂ
ಕುಮಾರ ಆದಿತ್ಯ ಗೋಪಾಲ ಗೌಡ, ರಾಜ್ಯಮಟ್ಟದ ವಿಕಲಚೇತನ ಕ್ರೀಡಾಪಟು,
ಶ್ರೀ ಶ್ರೀಧರ ವಿ. ಅಂಬಿಗ, ನಿವೃತ್ತ ಸಿ.ಆರ್.ಪಿ.ಎಫ್.ಯೋಧರು,
ಶ್ರೀ ಮಾರು ಜಟ್ಟು ಗೌಡ, ನಾಟಿ ವೈದ್ಯರು,
ಶ್ರೀ ಕೆ.ಎನ್.ಮಂಜು, ಕಲಾವಿದರು, ಸಾಮಾಜಿಕ ಸೇವೆ,
ಕುಮಾರಿ ನಾಗವೇಣಿ ಈಶ್ವರ ಗೌಡ, ಕಬ್ಬರ್ಗಿ, ರಾಜ್ಯಮಟ್ಟದ ಕ್ರೀಡಾಪಟು. ಇವರನ್ನು ಸನ್ಮಾನಿಸಲಾಯಿತು.
Leave a Comment