ಗೋಕರ್ಣ :
ಇಲ್ಲಿಯ ಗ್ರಾ.ಪಂ ವ್ಯಾಪ್ತಿಯ ತದಡಿ ಮೀನುಗಾರಿಕಾ ವಾಣಿಜ್ಯ ಬಂದರು ಪ್ರದೇಶಕ್ಕೆ ಭೇಟಿ ನೀಡಿದ ರಾಜ್ಯ ಸರಕಾರದ ಬಂದರು ಹಾಗೂ ಲೋಕೋಪಯೋಗಿ ಸಚಿವ ಎಚ್.ಸಿ.ಮಹಾದೇವಪ್ಪ ತದಡಿ ಹಾಗೂ ಬೆಲೇಕಾನ ಪ್ರದೇಶಕ್ಕೆ ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಬುಧವಾರ ಭೇಟಿಯಿತ್ತು ಸ್ಥಳ ಪರೀಶೀಲನೆ ನಡೆಸಿದರು.
ಈ ಸಂದರ್ಬದಲ್ಲಿ ಸಚಿವರು ತದಡಿ ಗ್ರಾಮ ಬೃಹತ್ ಬಂದರು ನಿರ್ಮಾಣಕ್ಕೆ ವಾಣಿಜ್ಯ ಉದ್ದಿಮೆ ಬೆಳೆಸಲು ಎಲ್ಲ ಸೌಲತ್ತು ಹೊಂದಿದ ಯೋಗ್ಯ ಸ್ಥಳ, 1800 ಎಕರೆಗಿಂತ ಹೆಚ್ಚಿನ ಭೂಮಿ ಈಗಾಗಲೇ ಸರ್ಕಾರದ ವಶದಲ್ಲಿದೆ. ಬೃಹತ್ ವಾಣಿಜ್ಯ ಬಂದರು ಹಾಗೂ ಸರ್ವ ಋತುಗಳ ಅಂತರಾಷ್ಟ್ರೀಯ ಬಂದರು ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಈ ಬಂದರನ್ನು ಒಟ್ಟು 3800 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುವುದು. ಈಗಾಗಲೇ ಎ.ಐ.ಆರ್.ಡಿ.ಬಿ. ಸರ್ವೇ ನಡೆದಿದೆ, ಇನ್ಫ್ರಾಸ್ಟ್ರಕ್ಷರ್ ಯೋಜನೆಯಡಿಯಲ್ಲಿ ಟೆಂಡರ್ ಕರೆಯಲು ಆಯೋಜಿಸಿದೆ. ರಾಜ್ಯ ಸರಕಾg ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ತದಡಿ ಬಂದರನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ನುಡಿದರು.
ಇಲ್ಲಿಯ ಸ್ಥಳೀಯ ಮೀನುಗಾರರಿಗೆ ಯಾವುದೇ ತೊಂದರೆಯಾಗದೇ ಬಂದರು ಅಭಿವೃದ್ಧಿ ಪಡಿಸಲಾಗುವುದು. ಅಘನಾಶಿನಿ ಹಾಗೂ ಸಮುದ್ರ ಸಂಗಮ ಸ್ಥಳ ಹೂಳು ತುಂಬಿದೆ ಎಂಬುದನ್ನರಿತ ನಾವು ಪೂರ್ತಿ ಹೂಳನ್ನು ತೆಗೆದು ಮೀನುಗಾರಿಕಾ ಬೋಟಿಗಳಿಗೆ ಸುರಕ್ಷಿತತೆ ನಿರ್ಮಿಸಲು ನಮ್ಮ ಸರಕಾರ ಬದ್ದವಿದೆ ಎಂಬ ಮಾತನ್ನು ಸಚಿವರು ತಿಳಿಸಿದರು. ಸಚಿವರ ಜತೆಗೆ ಈ ಭಾಗದ ಶಾಸಕಿ ಹಾಗೂ ಕರಾವಳಿ ಪ್ರಾಧಿಕಾರದ ಅದ್ಯಕ್ಷೆ ಶಾರದಾ ಶೆಟ್ಟಿ ಇದ್ದು ತದಡಿ ಬಂದರುವಿನ ಅಭಿವೃದ್ದಿಯ ಹಾಗೂ ಸಮಸ್ಯೆಯ ಕುರಿತು ಹೆಚ್ಚಿನ ಮಾಹಿತಿ ಒದಗಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯೆ ಪಾರ್ವತಿ ನಾಯ್ಕ ಇಲ್ಲಿನ ತೊಂದರೆ ಕುರಿತು ವಿವರಣೆ ನೀಡಿದರು. ಈ ಸಂದರ್ಬದಲ್ಲಿ ಭಟ್ಕಳ ಶಾಸಕ ಮಂಕಾಳು ವೈದ್ಯ, ಫೆಡರೇಶನ್ ಸದಸ್ಯ ಉಮಾಕಾಂತ ಹೊಸ್ಕಟ್ಟಾ, ಪುಷ್ಫಾ ಕಲೇಕರ, ಅನಂತ ನಾಯ್ಕ, ಗೋಕರ್ಣ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮೋಹನ ನಾಯಕ, ಹಾಗು ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.
-pushpahas bastikar
Leave a Comment