ಕಾರವಾರ: ಅರ್ಚಕರ ಮೇಲೆ ದ್ವೇಷದ ಕಾರಣ ದೇವಸ್ಥಾನ ಆಡಳಿತ ಮಂಡಳಿ ಕೆಲ ಸದಸ್ಯರು ಅರ್ಚಕರ ನಾಲ್ವರು ಪುತ್ರಿಯರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಅವರ್ಸಾದ ಭೂದೇವಿ ದೇವಸ್ಥಾನ ಆವರಣದಲ್ಲಿ ಸಂಭವಿಸಿದೆ.
ಕಳೆದ ಕೆಲವು ದಿನಗಳ ಹಿಂದೆ ತಾಯಿಯ ಪುಣ್ಯತಿಥಿಗಾಗಿ ಹೊನ್ನಾವರದಿಂದ ಅಂಕೋಲಾ ತಾಲೂಕಿನ ಅವರ್ಸಾದ ತವರು ಮನೆಗೆ ಆಗಮಿಸಿದ್ದ ಅನುಸೂಯಾ, ಶಂಕರಿ, ಜಯಲಕ್ಮಿ, ಸುಮಂಗಲಾ ಎಂಬಾತರ ಮೇಲೆ ಹಲ್ಲೆ ನಡೆದಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಭೂದೇವಿ ದೇವಸ್ಥಾನ ಅರ್ಚಕ ಹಾಗೂ ಆಡಳಿತ ಮಂಡಳಿಯ ಕೆಲಸ ಸದಸ್ಯರ ನಡುವೆ ವೈಮನಸ್ಸಿತ್ತು.
ಈ ಕಾರಣ ಈ ಹಿಂದೆಯೇ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಪ್ರಕರಣ ಬಾಕಿ ಇರುವಾಗಲೇ ಆಗಾಗ ಜಗಳ ತೆಗೆಯುತ್ತಿದ್ದ ದೇವಸ್ಥಾನ ಆಡಳಿತ ಮಂಡಳಿಯ ಕೆಲ ಸದಸ್ಯರು ಶುಕ್ರವಾರ ಅರ್ಚಕರ ಪುತ್ರಿಯರ ಮೇಲೆ ಹಲ್ಲೆ ಮಾಡಿದ್ದಾರೆ. ತೀವ್ರತರವಾಗಿ ಗಾಯಗೊಂಡಿರುವ ಮಹಿಳೆಯರಿಗೆ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
Leave a Comment