• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿದ್ದವರನ್ನು ಭೇಟಿ ಮಾಡಿದ ಜನಶಕ್ತಿ ವೇದಿಕೆಯವರು

September 27, 2017 by Sachin Hegde Leave a Comment

ಕಾರವಾರ:

ನಗರದ ಹೃದಯಭಾಗದಲ್ಲಿ ಕುಟುಂಬವೊಂದು ಶೋಚನೀಯ ಬದುಕು ನಡೆಸುತ್ತಿರುವದು ಬೆಳಕಿಗೆ ಬಂದಿದೆ.
ಪಂಚರಾಶಿವಾಡದಲ್ಲಿ ಶೌಚಾಲಯವೂ ಇಲ್ಲದ ಮುರುಕಲು ಮನೆಯಲ್ಲಿ ತುಂಬಿಕೊಂಡಿರುವ ಕಸದ ರಾಶಿ ಮದ್ಯಯೇ 30 ವರ್ಷಗಳಿಂದ ಚಂದ್ರಕಲಾ ಮಾಳ್ಸೆಕರ್ ಎಂಬಾತರು ಕುಟುಂಭದವರೊಂದಿಗೆ ವಾಸವಿದ್ದಾರೆ. ಚಂದ್ರಕಲಾ ಮಾಳ್ಸೇಕರ್‍ಗೆ ಸುಮಿತಾ ಎಂಬ 23 ವರ್ಷದ ಮಗಳಿದ್ದು, ಆಕೆ ಮಾನಸಿಕ ಅಸ್ವಸ್ಥೆಯಾಗಿರುವದು ಗಮನಕ್ಕೆ ಬಂದಿತು. ಚಂದ್ರಕಲಾರ ಪತಿ ಕೂಡ ಮಾನಸಿಕ ಅಸ್ವಸ್ಥರಾಗಿದ್ದಾರೆ. ನಗರದಲ್ಲಿ ಅಲೆದಾಡುತ್ತಿದ್ದಾರೆ. ಇವರಿಗೆ ಇಬ್ಬರು ಪುತ್ರಿಯರಿದ್ದು, ಒಬ್ಬಳು ಈ ಹಿಂದೆ ಮಾನಸಿಕ ಸ್ಥಿರತೆ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಚಂದ್ರಕಲಾ ವಿವರಿಸಿದರು. ಕಳೆದ 10 ವರ್ಷಗಳಿಂದ ಸುಮಿತಾ ಕೂಡ ಮಾನಸಿಕವಾಗಿ ಜರ್ಜರಿತವಾಗಿದ್ದಾರೆ. ಗೋವಾದ ಬಾಂಬೋಲಿಯಲ್ಲಿ ಈಕೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಔಷಧಿ ಕೂಡ ಪಡೆಯಲು ವೈದ್ಯರು ತಿಳಿಸಿದ್ದರು. ಆದರೆ ಬಡತನದ ಕಾರಣದಿಂದ ಔಷಧಿಯನ್ನು ಪೂರೈಸುವ ಸಾಮಥ್ರ್ಯ ಕುಟುಂಬಕ್ಕಿಲ್ಲ. ಹೀಗಾಗಿ ಸುಮಿತಾ ಮಾಳ್ಸೆಕರ್ ಜೀವನ ಕಸದ ರಾಶಿಯಲ್ಲಿಯೇ ಕೊರಗುತ್ತಿದೆ.
ಈ ಕುಟುಂಬ ನಗರಸಭೆಗೆ ಮನೆ ತೆರಿಗೆ ಪಾವತಿಸುತ್ತದೆ. ಹೆಸ್ಕಾಂಗೆ ವಿದ್ಯುತ್ ಬಿಲ್ ಕಟ್ಟುತ್ತದೆ. ಹೀಗಿರುವಾಗ ಮೂರು ದಶಕಗಳಿಂದ ಇಲ್ಲಿ ವಾಸವಿದ್ದರೂ ಇವರ ಬದುಕಿನ ಬಗ್ಗೆ ಕೇಳುವವರಿಲ್ಲದಂತಾಗಿದೆ. ಸರ್ಕಾರ ಜಾರಿಗೆ ತರುವ ಯೋಜನೆಗಳು ಇವರಿಗೆ ದೊರಕುತ್ತಿಲ್ಲ. ಈ ವಿಷಯ ಅರಿತ ಜನಶಕ್ತಿ ವೇದಿಕೆಯವರು ಬದುಕು ಸಾಗಿಸುತ್ತಿದ್ದ ಈ ಕುಟುಂಬಕ್ಕೆ ಆಸರೆಯಾಗಲು ಮುಂದೆ ಬಂದಿದ್ದು, ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು. ಕಳೆದ ಕೆಲ ದಿನಗಳ ಹೊಂದೆ ಇಂತಹುದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದ್ದನ್ನು ವೇದಿಕೆಯವರು ನೆನಪಿಸಿಕೊಂಡರು. ಸರ್ಕಾರ ಎಲ್ಲಡೆ ಶೌಚಾಲಯ ನಿರ್ಮಾಣಕ್ಕೆ ಪ್ರಚಾರ ನೀಡುತ್ತಿದೆ. ಆದರೆ, ನಗರ ವ್ಯಾಪ್ತಿಯಲ್ಲಿಯೇ ಇಂತಹ ಕುಟುಂಬವಿದ್ದರೂ ಅವರ ಅಳಲು ಆಲಿಸುವವರಿಲ್ಲ ಎಂದು ಮಾಧವ ನಾಯಕ ಅಸಮಧಾನ ವ್ಯಕ್ತಪಡಿಸಿದರು. ಮಾನಸಿಕ ಅಸ್ವಸ್ಥರಾದವರನ್ನು ಆಸ್ಪತ್ರೆಗೆ ಕಳುಹಿಸಿದ ವೇದಿಕೆಯವರು, ಶೋಚನಿಯ ಸ್ಥಿತಿಯಲ್ಲಿ ಬದುಕುತ್ತಿರುವವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸಬೇಕು ಎಂದು ಆಗ್ರಹಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Karwar News Tagged With: ಇಬ್ಬರು ಪುತ್ರಿಯರಿದ್ದು, ಒಬ್ಬಳು ಈ ಹಿಂದೆ ಮಾನಸಿಕ ಸ್ಥಿರತೆ, ಚಂದ್ರಕಲಾ ಮಾಳ್ಸೆಕರ್, ಬದುಕುತ್ತಿದ್ದವರನ್ನು ಭೇಟಿ, ಮಾಡಿದ ಜನಶಕ್ತಿ ವೇದಿಕೆಯವರು, ಮುರುಕಲು ಮನೆ, ಶೋಚನೀಯ ಸ್ಥಿತಿ, ಹೃದಯಭಾಗದಲ್ಲಿ ಕುಟುಂಬವೊಂದು

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar