ಹಳಿಯಾಳ:- ಲಯನ್ಸ ಇಂಟರನ್ಯಾಶನಲ್ ಕ್ಲಬ್, ಆರೋಗ್ಯ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಳಿಯಾಳ ಪಟ್ಟಣದಲ್ಲಿ ಡೆಂಗ್ಯೂ ಜಾಗೃತಿ ಜಾಥಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಮಿನಿ ವಿಧಾನಸೌಧದ ಎದುರು ಡೆಂಗ್ಯೂ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ತಹಶಿಲ್ದಾರ್ ವಿಧ್ಯಾಧರ ಗುಳಗುಳಿ ಹಸಿರು ಧ್ವಜ ತೊರಿಸಿ ಚಾಲನೆ ನೀಡಿದರು.
ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳವರು, ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಮತ್ತು ಶಿಕ್ಷಕರು ಜಾಥಾದಲ್ಲಿ ಪಾಲ್ಗೊಂಡು ಪಟ್ಟಣ ಪ್ರಮುಖ ಬೀದಿಗಳಲ್ಲಿ ಸಂಚಿರಿಸಿದ ಜಾಥಾ ಡೆಂಗ್ಯೂ ರೋಗ ನಿವಾರಣೆ ಕುರಿತು ಕರ ಪತ್ರ ಹಂಚುವ ಮೂಲಕ ಅರಿವುಯ, ಜಾಗೃತಿ ಮೂಡಿಸಲಾಯಿತು.
ಈ ಸಂದಭದಲ್ಲಿ ಲಯನ್ಸ ಕ್ಲಬ ಅಧ್ಯಕ್ಷ ಎಮ್.ಆರ್ ಹಿರೇಮಠ, ಖಚಾಂಚಿ ಬಸವರಾಜ ಬೆಂಡಿಗೇರಿ ಮಠ, ಜಿಡಿ ಗಂಗಾಧರ, ತಾಲೂಕಾ ಆರೊಗ್ಯಾಧಿಕಾರಿ ಡಾ| ರಮೇಶ ಕದಂ ಇತರರು ಇದ್ದರು.
Leave a Comment