ಹೊನ್ನಾವರ: ಪಟ್ಟಣದ ರಾಷ್ರೀಯ ಹೆದ್ದಾರಿ ಸಮೀಪದ ಮಹಾಲೆ ಕಾಂಪ್ಲೆಕ್ಸ್ನಲ್ಲಿದ್ದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆ ಸಿಂಡಿಕೆಟ್ ಬ್ಯಾಂಕ್ ಎದುರಿನ ಕಟ್ಟಡಕ್ಕೆ ಸ್ಥಳಾಂತರವಾದ ಹಿನ್ನಲೆ ನೂತನ ಶಾಖೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷÀ ರವೀಂದ್ರನ್ ರಿಬ್ಬನ್ ಕತ್ತರಿಸುವ ಮೂಲಕ ನೂತನ ಶಾಖೆ ಉದ್ಘಾಟಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿ ನಮ್ಮ ಬ್ಯಾಂಕ್ನಲ್ಲಿ ಗ್ರಾಹಕರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ವಿವಿಧ ರೀತಿಯ ನೂತನ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ನಮ್ಮೆಲ್ಲಾ ಗ್ರಾಹಕರು ಹೆಚ್ಚಿನ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಇದು ಒಂದು ಗ್ರಾಮೀಣ ಬ್ಯಾಂಕ್ ಎಂದು ಕೆಲವರು ತಿಳಿದಿರುತ್ತಾರೆ ಅದು ತಪ್ಪು ಕಲ್ಪನೆ ನಮ್ಮ ಬ್ಯಾಂಕ್ನಲ್ಲಿ ಉಳಿದೆಲ್ಲಾ ಬ್ಯಾಂಕ್ಗಳಿಗಿಂತ ಹೆಚ್ಚಿನ ಸೌಲಭ್ಯಗಳಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಈರ್ವರಿಗೆ ಸಾಲಪತ್ರ ವಿತರಿಸಲಾಯಿತು. ನೂತನ ಶಾಖಾ ಕಟ್ಟಡದ ಮಾಲೀಕ ಸತ್ಯನಾರಾಯಣ ಶೆಟ್ ಅವರನ್ನು ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಎಮ್ಪಿಇ ಸೊಸೈಟಿಯ ಸದಸ್ಯರಾದ ಕೃಷ್ಣಮೂರ್ತಿ ಭಟ್ ಮಾತನಾಡಿ ಕೆವಿಜಿ ಬ್ಯಾಂಕ್ನೊಂದಿಗೆ ಬಹಳ ವರ್ಷಗಳಿಂದ ಉತ್ತಮ ಒಡನಾಟವಿದೆ. ಇತ್ತಿಚಿಗೆ ಒನ್ಲೈನ್ ಬ್ಯಾಂಕಿಗ್ ಹೆಚ್ಚಾಗಿ ಚಾಲ್ತಿಯಲ್ಲಿದೆ. ಆದರೆ ಯಾವ ಬ್ಯಾಂಕ್ಗಳು ಗ್ರಾಹಕನಿಗೆ ಒನ್ಲೈನ್ ಬ್ಯಾಂಕಿಗ್ ವ್ಯವಹಾರದ ಬಗ್ಗೆ ಸರಿಯಾಗಿ ತಿಳಿಸುತ್ತಿಲ್ಲ, ಗ್ರಾಹಕರು ಹೆಚ್ಚಾಗಿ ನೆಟ್ಬ್ಯಾಂಕಿಂಗ್ ಅವಲಂಭಿಸಿದರೆ ಅವರು ಬ್ಯಾಂಕ್ಗೆ ಅಲೆದಾಡುವ ಸಮಯವು ಉಳಿಯುತ್ತದೆ.ಬ್ಯಾಂಕ್ ಎಲ್ಲಿದೆ ಎನ್ನುವುದಕ್ಕಿಂತ ಹೇಗಿದೆ ಗ್ರಹಕರೊಂದಿಗಿನ ಒಡನಾಟ ಯಾವರೀತಿಯಲ್ಲಿದೆ ಎನ್ನುವುದು ಮುಖ್ಯವಾಗಿರುತ್ತದೆ ಎಂದರು.
ಅಂತೇಯೆ ಬ್ಯಾಂಕ್ನ ಗ್ರಾಹಕರು ಬ್ಯಾಂಕ್ನೊಂದಿಗಿನ ವ್ಯವಹಾರದ ಕುರಿತು ಅನಿಸಿಕೆ,ಅಭಿಪ್ರಾಯ ಹಂಚಿಕೊಂಡರು.
ವೇದಿಕೆಯಲ್ಲಿ ಕೆವಿಜಿ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ನಳಿನ್ ಕುಮಾರ್, ಹೊನ್ನಾವರ ಶಾಕೆಯ ಮ್ಯಾನೇಜರ್ ಶ್ರೀಕಾಂತ್ ಹೊಳ್ಳ ಉಪಸ್ಥಿತರಿದ್ದರು. ಬ್ಯಾಂಕ್ನ ಗ್ರಾಹಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಉಲ್ಲಾಸ ಗುನಗಾ ಕಾರ್ಯಕ್ರಮ ನಿರೂಪಿಸಿದರು.ನಳಿನ್ ಕುಮಾರ್ ಸ್ವಾಗತಿಸಿದರು. ಶ್ರೀಕಾಂತ್ ಹೊಳ್ಳ ವಂದಿಸಿದರು.
Leave a Comment