ಹಳಿಯಾಳ: ಮಕ್ಕಳಲ್ಲಿ ಸಾಮಾಜಿಕ ಕಳಕಳಿ, ಪರಿಸರ ಸಂರಕ್ಷಣೆ ಮತ್ತು ಸೇವಾ ಮನೋಭಾನೆಯಂತಹ ಗುಣಗಳನ್ನು ಕಲಿಸುವಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ ಎಂದು ತಾಲೂಕಾ ದೈಹಿಕ ಪರೀವೀಕ್ಷಕ ಸಲೀಂ ಜಮಾದರ ಹೇಳಿದರು. ಪಟ್ಟಣದ ರುಡ್ ಸೆಟ್ ಸಂಭ್ರಮ ಸಭಾ ಭವನದಲ್ಲಿ ನಡೆದ ತಾಲೂಕಾ ಭಾರತ್ ಸ್ಕೌಟ್ಸ್ ಗೈಡ್ಸ್ನ ಪುಶ್ಚೇತನ ಶಿಬಿರ ಹಾಗೂ ತಾಲೂಕಾ ಮಟ್ಟದ ದೇಶಭಕ್ತಿಗೀತೆ ಸ್ಪರ್ಧೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರುಡ್ ಸೆಟ್ತರಬೇತಿ ಸಂಸ್ಥೆಯ ನಿರ್ದೇಶಕ ನಿತ್ಯಾನಂದ ವೈದ್ಯ ಮಾತನಾಡಿ ತ್ಯಾಗ ಮತ್ತು ಸೇವೆ ಇವುಗಳ ಕುರಿತು ಮಕ್ಕಳಿರುವಾಗಲೇ ತಿಳಿಸಿದಾಗ ಅವರು ಉತ್ತಮ ಪ್ರಜೆಗಳಾಗುತ್ತಾರೆ ಎಂದು ಅಭಿಪ್ರಾಯಪಟ್ಟರು. ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯ್ಕ ಮಾತನಾಡಿ ಶಾಲೆ ಶಿಸ್ತಿನಿಂದಿರಲು ಸ್ಕೌಟ್ಸ್ ಮತ್ತು ಗೈಡ್ಸ್ ಪೂರಕ ಎಂದು ಹೇಳದರು. ವಿವಿಡಿ ಸ್ಕೂಲ್ ಆಪ್ ಎಕ್ಷಲೇನ್ಸ ಪ್ರಾಂಶುಪಾಲ ಸಿ.ಪಿ ಪಾಟೀಲ್, ಶಿರಸಿ ಶೈಕ್ಷಣಿಕ ಜಿಲ್ಲೆಯ ಭಾರತ್ ಸ್ಕೌಟ್ಸ್ ಗೈಡ್ಸ್ನ ಮುಖ್ಯ ಆಯುಕ್ತ ಎಮ್ಎಮ್ ಭಟ್, ಜಿಲ್ಲಾ ಆಯುಕ್ತ ವಿ ಹೆಚ್ ಭಟ್ಕಳ, ಜಿಲ್ಲಾ ಸಂಘಟಕ ವೀರೇಶ ಮಾದರ, ತಾಲೂಕಾ ಆಯುಕ್ತ ಆರ್ ವಾಯ್ ಘಟಕಾಂಬ್ಳೆ, ಗೈಡ್ಸ್ ತರಬೇತಿದಾರ ಲಿನೇಟ್ ಶೇರಾವೋ, ನಿರ್ಣಾಯಕರಾದ ಮಂಜುನಾಥ ಮತ್ತು ಗೀತಾ ಹೆಗಡೆ ಕಾರ್ಯಕ್ರಮದಲ್ಲಿ ಇದ್ದರು. ದೇಶ ಭಕ್ತಿಗೀತೆ ಸ್ಪರ್ಧೆಯಲ್ಲಿ ವಿವಿಡಿ ಸ್ಕೂಲ್ ಆಪ್ ಎಕ್ಷಲೇನ್ಸ ಶಾಲೆಯ ವಿಧ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು. ಮಿಲಾಗ್ರಿಸ್ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳು ದ್ವೀತಿಯ ಸ್ಥಾನ ಮತ್ತು ನಿತ್ಯಾನಂದ ಪ್ರೌಢಶಾಲೆ ಕೆಕೆಹಳ್ಳಿ ಪ್ರೌಢ ಶಾಲೆಯ ಮಕ್ಕಳು ತೃತೀಯ ಸ್ಥಾನ ಪಡೆದರು. ಕಾರ್ಯಕ್ರಮದ ನಂತರ ಕಾರ್ಯಕಾರಿ ಸಭೆಯಲ್ಲಿ ಕೆಸರೊಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯೆ ಪ್ರವೀಣಾ ಪಾಟಣಕರ್ ಖಜಾಂಚಿಯಾಗಿ ಆಯ್ಕೆಯಾದರು. ತಾಲೂಕಾ ಕಾರ್ಯದರ್ಶಿ ರಮೇಶ ಕುರಿಯವರ, ಶಿಕ್ಷಕ ಸಿದ್ದಪ್ಪ ಬಿರಾದಾರ ಹಾಗೂ ಪ್ರವೀಣ ಪಾಯಿದೆ ಕಾರ್ಯಕ್ರಮ ನಿರ್ವಹಿಸಿದರು.
Leave a Comment