ಹಳಿಯಾಳ: ನೀರಾವರಿ ಸೌಲಭ್ಯ ಹೊಂದಿರುವ ರೈತರು ಕೃಷಿ ಚಟುವಟಿಗಳ ಜೋತೆ ತೋಟಗಾರಿಕೆ ಬೆಳೆಗಳನ್ನು ಬೆಳೆದು ಅರ್ಥಿಕವಾಗಿ ಸಬಲರಾಗುವಂತೆ ಸಹಾಯಕ ತೋಟಗಾರಿಕೆ ನಿರ್ದೇಶಕ ಎ.ಆರ್.ಹೇರಿಯಾಳ ಕರೆ ನೀಡಿದರು. ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವತಿಯಿಂದ ಸಂಕನಕೊಪ ಗ್ರಾಮದಲ್ಲಿ ರೈತರಿಗೆ ತೋಟಗಾರಿಕೆ ಇಲಾಖೆಯ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮದಲ್ಲಿ ಭಾಗ ವಹಿಸಿ ರೈತರಿಗೆ ಉಚಿತ ತರಕಾರಿ ಬೀಜಗಳನ್ನು ವಿತರಿಸಿ ಮಾತನಾಡಿದರು. ತೋಟಗಾರಿಕೆ ಇಲಾಖೆಯಲ್ಲಿ ಕೃಷಿ ಭಾಗ್ಯ ಯೋಜನೆಯಡಿ ನೀರಾವರಿ ಸೌಲಭ್ಯ ಹೊಂದಿರುವ ಎಲ್ಲಾ ವರ್ಗದ ರೈತರಿಗೆ 2 ಸಾವಿರ ರೂ. ಮೌಲ್ಯದ ತರಕಾರಿ ಬೀಜಗಳಾದ ಟೊಮೇಟೊ, ಸೌತೆ, ಮೆಣಸು ಹಾಗೂ ಕಲ್ಲಂಡಿ ಬೀಜಗಳನ್ನು ವಿತರಿಸಲಾಗುವುದು. ಆಸಕ್ತ ರೈತರು ಜಮೀನಿಗೆ ಸಂಬಂಧಿಸಿದ ಸೂಕ್ತ ದಾಖಲಾತಿಗಳನ್ನು ಸಲ್ಲಿಸಿ ತರಕಾರಿ ಬೀಜಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು. ಕೆನರಾ ಬ್ಯಾಂಕ್ ಆರ್ಸೆಟ್ ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ, ಸಹಾಯಕ ತೋಟಗಾರಿಕೆ ಅಧಿಕಾರಿ ಎಮ್.ಎಮ್.ಮುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾವಲವಾಡ ಗ್ರಾಪಂ ಸದಸ್ಯ ಚಂದ್ರಕಾಂತ ಬನದುರಕರ, ಯೋಜನಾಧಿಕಾರಿ ಸಂತೋಷ ಪರಿಟ, ಉಳವಯ್ಯಾ ಬೆಂಡಿಗೆರಿ ಇದ್ದರು.
Leave a Comment