ಹೊನ್ನಾವರ : ತಾಲೂಕಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿ ಸುರೇಶ ಜಿ.ನಾಯ್ಕ ಅಧಿಕಾರ ಸ್ವೀಕರಿಸಿದ್ದಾರೆ. ಇವರು ಹೊನ್ನಾವರ ತಾಲೂಕಿನ ಮಂಕಿ ಬಣಶಾಲೆಯ ಕ್ರೀಯಾಶೀಲ ಸಂಘಟನೆಯ ಸದಸ್ಯರಾಗಿದ್ದು, ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ, ಶಿಕ್ಷಣ ಇಲಾಖೆಯ 2009-10 ನೇ ಸಾಲಿನ ವಿಭಾಗ ಮಟ್ಟದ ವಿಶಿಷ್ಟ ಸೇವಾ ಪ್ರಶಸ್ತಿ ಪಡೆದಿರುತ್ತಾರೆ. ಈ ಅಧಿಕಾರ ಸ್ವೀಕರಿಸುವ ಪೂರ್ವದಲ್ಲಿ ತಾಲೂಕಿನ ಅಕ್ಷರ ದಾಸೋಹ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಇವರ ಸಾಹಿತ್ಯ ಲೋಕದಲ್ಲಿ ಅನೇಕ ಕೃತಿಯನ್ನು ರಚಿಸಿದ್ದು, ಕಳೆದ ಜೂ. 30 ರಂದು ಸಾಹಿತಿಗಳಾಗಿರುವ ಇವರು 7 ನೇ ಕೃತಿ “ಜೀವನ” ಹನಿಗವನ ಸಂಕಲನ ಬಿಡುಗಡೆ ಮಾಡಿದ್ದರು. ಇವರು ರಜಾ ರಹಿತ ಸರ್ಕಾರಿ ಸೇವೆ ಸಲ್ಲಿಸಿ ಸಾರ್ವಜನಿಕರ ಹಾಗೂ ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದರು.
Leave a Comment