ಹೊನ್ನಾವರ ,ತಾಲೂಕಿನ ಬಂಗಾರಮಕ್ಕಿ ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರು ಲೋಕಕಲ್ಯಾಣಕ್ಕಾಗಿ ವಿಲಂಬಿ ಸಂವತ್ಸರದ ಆಷಾಢ ಶುಕ್ಲ ಪೌರ್ಣಿಮೆ ಶುಕ್ರವಾರವಾದ ಇಂದು ಚಾತುರ್ಮಾಸ್ಯ ವ್ರತವನ್ನು ಆರಂಭಿಸಿದರು. ವ್ಯಾಸ ಪೂರ್ಣಿಮೆಯ ಶುಭ ದಿವಸದಲ್ಲಿ ಪ್ರಾರಂಭವಾಗಿ ಈ ವ್ರತವು 60 ದಿನಗಳ ಕಾಲ ಆಚರಿಸಲ್ಪಟ್ಟು 24-09-2018 ಸೋಮವಾರದಂದು ಸೀಮೋಲ್ಲಂಘನ ಕಾರ್ಯಕ್ರಮ ನಡೆಯಲಿದೆ.
ಇಂದು ಈ ಪುಣ್ಯಪ್ರದ ಸಂದರ್ಭದಲ್ಲಿ ಶಿಷ್ಯ ಭಕ್ತರು, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಶಿಕ್ಷಕರು ಆಗಮಿಸಿ ತೀರ್ಥಪ್ರಸಾದ ಆಶೀರ್ಮಂತ್ರಾಕ್ಷತೆಯನ್ನು ಸ್ವೀಕರಿಸಿ ಧನ್ಯರಾದರು.
Leave a Comment