ಹಳಿಯಾಳ:- ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕದಿಂದ ಪಟ್ಟಣದಲ್ಲಿ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೈನಿಕರ ಪರ ಘೊಷಣೆಗಳನ್ನೂ ಕೂಗುತ್ತ ಜಾಥಾ ನಡೆಸಿದ ಸಂಘಟನೆಯವರು ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿರುವ ಕ್ರಾಂತೀವಿರ ಸಂಗೋಳ್ಳಿ ರಾಯಣ್ಣ ಪುಥ್ಥಳಿ ಎದುರಿಗೆ ಮೆಣದ ಬತ್ತಿಗಳನ್ನು ಬೆಳಗಿಸಿ ಸೈನಿಕರಿಗೆ ಶ್ರದ್ದಾಂಜಲಿ ಸಲ್ಲಿಸಿ ವಿಜಯ ದಿವಸ್ ಆಚರಿಸಿದರು. ಸಂಘಟನೆಯ ತಾಲೂಕಾಧ್ಯಕ್ಷ ವಿಲಾಸ ಕಣಗಲಿ, ಪ್ರಮುಖರಾದ ಶೀರಾಜ ಮುನವಳ್ಳಿ, ಅನಿಸ ಪೀರವಾಲೆ, ಗಣೇಶ ಗೊಸಪ್ಪನವರ, ಮಾದೇವ ಚಲವಾದಿ, ಈಶ್ವರ ಗಾಣಗೇರ, ಶೀವು ಚಲವಾದಿ, ನವೀನ, ಮಂಜು ಮೊದಲಾದವರು ಇದ್ದರು
Leave a Comment