ಹಳಿಯಾಳ :- ತಾಲೂಕಿನ ಛೋಟಾಕಾನಸಿರಡಾ ಭಾಗದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶಿಸಿ ಅನಧೀಕೃತವಾಗಿ ಸಾಗ ಹಸಿ ಮರವನ್ನು ಕಡಿದು ಸಾಗಾಟ ಮಾಡಲು ಯತ್ನಿಸುತ್ತಿದ್ದ ಮಾಲು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಸಾಂಬ್ರಾಣಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ ನಿರ್ದೇಶನ ಹಾಗೂ ಎಸಿಎಫ್ ಸಂತೋಷ ಕೆಂಚಪ್ಪನವರ ಮಾರ್ಗದರ್ಶನದಲ್ಲಿ ಸಾಂಬ್ರಾಣಿ ವಲಯ ಅರಣ್ಯಾಧಿಕಾರಿ ದೀಪಕ್ ನಾಯ್ಕ ನೇತೃತ್ವದಲ್ಲಿ ಸಾಂಬ್ರಾಣಿ ವಲಯದ ಬೊಮ್ಮನಳ್ಳಿ ಶಾಖೆಯ ಛೋಟಾಕಾನಸಿರಡಾ ಬಳಿ ಕಾರ್ಯಾಚರಣೆ ನಡೆಸಿ ಅದೇ ಗ್ರಾಮದ ನಿವಾಸಿ ಆರೋಪಿ ಸಂತೋಷ ಫರಾಶಿ ಫಿಗ್ರೇಡೋಯನ್ನು ಬಂಧಿಸಿ ಆತನಿಂದ ಸುಮಾರು 50ಸಾವಿರಕ್ಕೂ ಅಧಿಕ ಬೆಲೆಬಾಳುವ ರೂಪಾಂತರಿಸಿದ ಸಾಗಮರದ ತುಂಡುಗಳು, 2ಲಕ್ಷ ರೂ. ಬೆಲೆ ಬಾಳುವ ಓಮ್ನಿ ವಾಹವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ವಲಯದ ಸಿಬ್ಬಂದಿಗಳಾದ ಉಪ ವಲಯ ಅರಣ್ಯಾಧಿಕಾರಿಗಳಾದ ಕೆ.ವಿ.ಮಹಾಲೆ, ಉಮೇಶ, ಮಾರಾನಾಯಕ, ಎಸ್.ಎಫ್.ಕುರಿ, ದೀಪಕ ಜಂಬೂರೆ, ಅರಣ್ಯ ರಕ್ಷಕರಾದ ಶಿವಲಿಂಗ ಕರಗಣ್ಣಿ, ಉಮೇಶ ಹೊಸ್ಮನಿ, ಜೆ.ಎಚ್.ಮುಲ್ಲಾ, ಶರಣ ಹಚ್ಯಾಳ, ಅಶೋಕ ಅಳವಾಡಕರ, ಅರಣ್ಯ ವೀಕ್ಷಕ ಶಿವಾಜಿ ರಾವುತ, ವಾಹನ ಚಾಲಕರಾದ ದೊಂಡಿಬಾ ಪಟಕಾರೆ, ಹಾಗೂ ಲಕ್ಷ್ಮಣ ಕರೆಹೋಳೆ ಇದ್ದರು.
Leave a Comment