ಹಳಿಯಾಳ:- ಇತ್ತೀಚಿಗೆ ಕೋಲೆಗಿಡಾದ ದಾಂಡೇಲಿ ನಗರದ ಹಿರಿಯ ವಕೀಲ ಅಜೀತ ಎಂ ನಾಯ್ಕ ರವರ ಹತ್ಯೆಯನ್ನು ಖಂಡಿಸಿ ಹಳಿಯಾಳ ವಕೀಲರ ಸಂಘ ಸೋಮವಾರದಂದು ನ್ಯಾಯಾಲಯದ ಕಾರ್ಯಕಲಾಪದಿಂದ ದೂರ ಉಳಿದು ತಹಶೀಲ್ದಾರ ವಿದ್ಯಾಧರ ಗುಳಗುಳಿ ರವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಬೆಳಿಗ್ಗೆ ಎಲ್ಲ ವಕೀಲರು ಸಂಘದ ಸದಸ್ಯರು ಸಭೆ ನಡೆಸಿ ನಂತರ ಮೌನ ಮೆರವಣಿಗೆ ನಡೆಸಿ ತಹಶೀಲ್ದಾರ ಕಾರ್ಯಾಲಯಕ್ಕೆ ತೆರಳಿ ಮನವಿ ಸಲ್ಲಿಸಿದರು.
ಜುಲೈ 27ರ ರಾತ್ರಿ 9.30 ಗಂಟೆಯ ಸುಮಾರಿಗೆ ದುಷ್ಕರ್ಮಿಗಳು ದಾಂಡೇಲಿಯ ಹಿರಿಯ ವಕೀಲ ಅಜೀತ ಎಂ ನಾಯ್ಕ ರವರನ್ನು ಬರ್ಭರವಾಗಿ ಹತ್ಯೆ ಮಾಡಿ ಕೋಲೆ ಮಾಡಿರುವುದನ್ನು ಖಂಡಿಸುತ್ತೇವೆ. ಹತ್ಯೆಗೈದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ಆಗುತ್ತಿರುವ ಈ ರೀತಿಯ ಹತ್ಯೆ ನಿಯಂತ್ರಣಗೊಳಿಸಲು ಹಾಗೂ ವಕೀಲರುಗಳಿಗೆ ರಕ್ಷಣೆಗೆ ಸಂಬಂಧಪಟ್ಟಂತೆ ವಕೀಲರ ಕಾಯ್ದೆ ಅಡ್ವೋಕೇಟ್ ಆಕ್ಟ್ ಸೂಕ್ತ ಕಲಂ ಸೇರ್ಪಡೆಯಾಗುವಂತಹ ಕಾಯ್ದೆಯಲ್ಲಿ ತಿದ್ದುಪಡಿ ಮಾಡುವುದು ಮತ್ತು ವಕೀಲ ವೃತ್ತಿಯು ಸಂವಿಧಾನದ ಅಡಿಯಲ್ಲಿ ಮೂಲಭೂತ ಹಕ್ಕು ಇದ್ದು ಅದನ್ನು ಜಾರಿಗೊಳಿಸುವುದು ಅತೀ ಜರೂರ ಇರುತ್ತದೆ. ಹಾಗೂ ವಕೀಲರಿಗೆ ಸೂಕ್ತ ರಕ್ಷಣೆ ಒದಗಿಸುವುದು ಕೂಡ ಅವಶ್ಯವಾಗಿರುತ್ತದೆ ಎಂದು ಮನವಿಯಲ್ಲಿ ತಿಳಿಸಿರುತ್ತಾರೆ.
ವಕೀಲ ಸಂಘದ ಅಧ್ಯಕ್ಷ ಎ.ಎಂ.ಪಾಟೀಲ. ಸದಸ್ಯ ಬಿ.ಎನ್.ಪಟ್ಟೇಕರ. ಎಲ್.ಎಸ್.ಅರಶಿನಗೇರಿ, ಎಂ.ವಿ.ಅಷ್ಟೇಕರ, ಅಜೀಮ ಮುಜಾವರ, ಸಿ.ವಿ.ನುಚ್ಚಂಬ್ಲಿ, ಅಮೀನ ಮುಜಾವರ, ಮಹಾದೇವಿ ಅಂಗಡಿ, ಸಂತೋಷ ಹಬ್ಬು, ಸುಂದರ ಕಾನಕತ್ರಿ, ಬಿ.ವಿ.ರಜಪೂತ, ಎ.ಎಫ್.ಕಿತ್ತೂರ,
ಎಸ್.ಆರ್.ಗುನಗಾ, ಎಸ್.ವೈ.ಗುಪಿತ, ಎಮ್.ಎನ್.ಜುಂಜವಾಡಕರ. ಎ.ಪಿ.ಢೇಪಿ, ಎಸ್.ಎಲ್.ಸೋಮಣ್ಣವರ, ಸಂಗೀತಾ ಕಾಮ್ರೇಕರ, ರೇಣುಕಾ ಚೌಗುಲೆ, ಸುಪ್ರಿತ ಕಲಾಜ, ವೈ.ಎನ್.ಅರಶಿನಗೇರಿ, ಮೇಘರಾಜ ಎಂ.ಆರ್, ಶೃತಿ ಗರಡೋಳಕರ, ಸೂರೋಜಿ ವೈ.ಎನ್. ವಿ.ವಿ.ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಶೃದ್ದಾಂಜಲಿ ಸಭೆ :- ಸೋಮವಾರ ಬೆಳಿಗ್ಗೆ ನ್ಯಾಯಾಲಯದಲ್ಲಿ ಜುಲೈ 27 ರಂದು ದುಷ್ಕರ್ಮಿಗಳಿಂದ ಹತ್ಯೆಗಿಡಾದ ದಾಂಡೇಲಿಯ ಹಿರಿಯ ವಕೀಲ ಅಜೀತ ಎಂ ನಾಯ್ಕ ರ ಗೌರವಾರ್ಥವಾಗಿ ಶೃದ್ದಾಂಜಲಿ ಸಭೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ವಕೀಲರು ಮಾತನಾಡಿ ಉತ್ತರ ಕನ್ನಡ ಜಿಲ್ಲೆ ಅಹಿಂಸಾಪರ ಜಿಲ್ಲೆಯಾಗಿದ್ದು, ಈ ಭಾಗದಲ್ಲಿ ಕೋಲೆ, ಸುಲಿಗೆ, ದರೋಡೆ ತೀರಾ ಕಡಿಮೆ ಅಂತಹದರಲ್ಲಿ ಜುಲೈ 27 ರಂದು ಪೇಟೆಯ ನಡುಮಧ್ಯ ಭಾಗದಲ್ಲಿಯೇ ಹಿರಿಯ ವಕೀಲ ಅಜೀತ ಎಂ ನಾಯ್ಕ ರವರನ್ನು ಹತ್ಯೆ ಮಾಡಿದ್ದು ತೀರಾ ಖಂಡನೀಯ. ಇದರಿಂದ ಮುಂದಿನ ದಿನಗಳಲ್ಲಿನ ವಕೀಲರು ತಮ್ಮ ವಖಾಲತ್ತು ಮಾಡುವುದು ಕಷ್ಟ ಸಾಧ್ಯ. ವಕೀಲರಿಗೆ ಸೂಕ್ತ ರಕ್ಷಣೆ ನೀಡಬೇಕು. ವಕೀಲರ ರಕ್ಷಣೆಯ ಬಗ್ಗೆ ವಕೀಲರ ಅಧಿನಿಯಮದಲ್ಲಿ ಪ್ರಾವಿಶನ್ ನ್ನು ಇಡಬೇಕ ಎಂದರು ಆಗ್ರಹಿಸಿದರು. ನಂತರ ಮೃತರ ಗೌರವಾರ್ಥ ಒಂದು ನಿಮಿಷ ಮೌನ ಆಚರಿಸಿ ಶೃದ್ದಾಂಜಲಿ ಆಚರಿಸಿದರು. ಈ ಸಂದರ್ಭದಲ್ಲಿ ಹಿರಿಯ ನ್ಯಾಯಾಧೀಶ ಶಿಲ್ಪಾ ಎಚ್.ಎ, ನ್ಯಾಯಾಧೀಶ ಬಸವರಾಜ ಸನದಿ, ಸಹಾಯಕ ಸರ್ಕಾರಿ ಅಭಿಯೋಜಕ ಅಜೀತ ಜನಗೌಡಾ, ವಕೀಲ ಸಂಘದ ಅಧ್ಯಕ್ಷ ಎ.ಎಂ.ಪಾಟೀಲ, ಬಿ.ಎನ್.ಪಟ್ಟೇಕರ, ಎಲ್.ಎಸ್.ಅರಶಿನಗೇರಿ, ಎಮ್.ವಿ.ಅಷ್ಟೆಕರ, ಎ.ಪಿ.ಮುಜಾವರ, ಧಾರವಾಡದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎ.ಪಿ.ಮುರಾರಿ, ಯಲ್ಲಾಪೂರದ ಎನ್.ಆರ್.ಭಟ್ಟ, ಯು.ಎಸ್.ಶಿಂಧೆ ಮತ್ತಿತರ ಹಳಿಯಾಳ, ಧಾರವಾಡ, ಹುಬ್ಬಳ್ಳಿ, ಬೆಳಗಾವಿ ವಕೀಲ ಸಂಘದ ಸದಸ್ಯರು ಉಪಸ್ಥಿತರಿದ್ದರು.
Leave a Comment