ಹಳಿಯಾಳ:- ಹಳಿಯಾಳದ ಸವಿತಾ ಕ್ಷೌರಿಕ ಸಮಾಜಕ್ಕೆ ಸಭಾಭವನ ನಿರ್ಮಿಸಿಕೊಳ್ಳಲು ಪುರಸಭೆಯಿಂದ ನಿವೇಶನ ಮಂಜೂರಿ ಮಾಡಿಸುವಂತೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ಅವರಿಗೆ ಸವಿತಾ ಸಮಾಜದವರು ಮನವಿ ಸಲ್ಲಿಸಿದರು. ವಚನಕಾರ ಅಪ್ಪಣ್ಣಾ ಹಡಪದರ ಭಾವಚಿತ್ರದೊಂದಿಗೆ ಮೆರವಣಿಗೆಯಲ್ಲಿ ವಿಪ ಸದಸ್ಯರ ಕಾರ್ಯಾಲಯಕ್ಕೆ ಆಗಮಿಸಿದ ಸವಿತಾ ಕ್ಷೌರಿಕ ಸಮಾಜದವರು ಘೋಟ್ನೇಕರ ಅವರಿಗೆ ಮನವಿಯನ್ನು ನೀಡಿದರು. ಮನವಿಗೆ ಸ್ಪಂದಿಸಿದ ಘೋಟ್ನೇಕರ ಸಭಾ ಭವನಕ್ಕಾಗಿ ಪುರಸಭೆಯಿಂದ ನಿವೇಶನವನ್ನು ನೀಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಎ.ಪಿ.ಎಮ್.ಸಿ ಅಧ್ಯಕ್ಷ ಅನಿಲ ಚವ್ಹಾಣ, ಉದ್ಯಮಿ ಅಶೋಕ ಘೋಟ್ನೇಕರ, ಸವಿತಾ ಸಮಾಜದ ನಗರಾಧ್ಯಕ್ಷ ಶ್ರೀನಿವಾಸ ಅನಗೊಂಡ, ಉಪಾಧ್ಯಕ್ಷ ರಮೇಶ ನಾವಲಗಿ, ತಾಲೂಕಾಧ್ಯಕ್ಷ ಈರಣ್ಣ ನಾವಲಗಿ, ಕಾಂತು ಆಯಟ್ಟಿ ಮೊದಲಾದವರು ಇದ್ದರು.
Leave a Comment