ಹಳಿಯಾಳ: ಪಟ್ಟಣದ ಮೋತಿ ಕೆರೆ ಹತ್ತಿರದ ನಿವಾಸಿ ಕೆಎಸ್ಆರ್ಟಿಸಿ ಸಂಸ್ಥೆಯ ನಿವೃತ್ತ ಚಾಲಕ ತಾತೋಬಾ (ತಾತ್ಯಾ) ಗಣು ಖಾಂದೋಳಕರ್ (62) ಅನಾರೋಗ್ಯದ ಕಾರಣ ತಮ್ಮ ನಿವಾಸದಲ್ಲಿ ನಿಧನರಾದರು. ಹಳಿಯಾಳ ಕೆಎಸ್ಆರ್ಟಿಸಿಯಲ್ಲಿ ಸತತ 25 ವರ್ಷ ಚಾಲಕರಾಗಿ ಸಾರ್ವಜನಿಕರ ವಿಶೇಷವಾಗಿ ವಿದ್ಯಾರ್ಥಿಗಳ ಮೆಚ್ಚಿನ ತಾತ್ಯಾ ಮಾಮಾ ಎಂದು ಪ್ರಶಂಸೆಗೆ ಪಾತ್ರವಾಗಿದ್ದ ತಾತೋಬಾ ಸಂಸ್ಥೆಯಿಂದ ಒಳ್ಳೆಯ ಚಾಲಕ ಪ್ರಶಸ್ತಿಗೆ ಭಾಜನರಾಗಿದ್ದರು. ಮೃತರು ಪತ್ನಿ ಹಾಗೂ ಎರಡು ಹೆಣ್ಣು ಮತ್ತು ಒಬ್ಬ ಮಗ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಸಂತಾಪ: ಸಚಿವ ಆರ್. ವಿ. ದೇಶಪಾಂಡೆ, ಎಮ್ಎಲ್ಸಿ ಎಸ್. ಎಲ್, ಘೋಟ್ನೇಕರ್, ಮಾಜಿ ಎಮ್ಎಲ್ಸಿ ವಿ. ಡಿ ಹೆಗಡೆ, ಮಜಿ ಎಮ್ಎಲ್ ಎ ಸುನಿಲ್ ಹೆಗಡೆ, ಹಿರಿಯ ನಗರೀಕರ ವೇದಿಕೆ, ಶಿಕ್ಷಕರ ಸಂಘ, ಕೆಎಸ್ಆರ್ಟಿಸಿ ಅಧಿಕರಿ ಹಾಗೂ ಸಿಬ್ಬಂದಿ ವರ್ಗ ಮುಂತಾದವರು ಸಂತಾಪ ಸೂಚಿಸಿದ್ದಾರೆ.
Leave a Comment