ಹೊನ್ನಾವರ .ಪ್ರಾಮಾಣಿಕ ಸೇವೆಯಲ್ಲಿರುವ ಸಂತೃಪ್ತಿ ಬೇರೆ ಯಾವುದರಲ್ಲೂ ಸಿಗಲು
ಸಾಧ್ಯವಿಲ್ಲಾ – ವಿಷ್ಣು ನಾಯ್ಕ ರವರ ಕುರಿತು ಸನ್ಮಾನ ಸಮಾರಂಭದಲ್ಲಿ :
ಉಲ್ಲಾಸ ನಾಯ್ಕ, ತಾಲೂಕಾ ಪಂಚಾಯತ ಅಧ್ಯಕ್ಷರು ನುಡಿದರು
ಮನುಷ್ಯ ತನ್ನ ಜೀವನದ ನಿರ್ವಹಣೆಗೆ ಒಂದಲ್ಲಾ ಒಂದು ಕೆಲಸ ನಿರ್ವಹಿಸಲೇ ಬೇಕಾಗುತ್ತದೆ. ಆ ಕೆಲಸದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದರೇ ಮಾತ್ರ ಅಭಿನಂದನೆ, ಸನ್ಮಾನ ಮತ್ತು ಶ್ಲಾಘನೆ ಸಿಗುತ್ತದೆ. ಆಗ ಆ ವ್ಯಕ್ತಿಗೆ ಸಂತೃಪ್ತಿ ದೊರೆಯುತ್ತದೆ ಎಂದು ತಾಲೂಕಾ ಪಂಚಾಯತ ಅಧ್ಯಕ್ಷರಾದ ಶ್ರೀ ಉಲ್ಲಾಸ ಈಶ್ವರ ನಾಯ್ಕ ರವರು ನುಡಿದರು. ಅವರು ತಾಲೂಕಾ ಪಂಚಾಯತ ಕಛೇರಿಯಲ್ಲಿ 13 ವರ್ಷಗಳ ಕಾಲ ಜವಾನನಾಗಿ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿ ವಯೋ ನಿವೃತ್ತಿಯಾದ ವಿಷ್ಣು ನಾಯ್ಕ ರವರ ಬಿಳ್ಕೋಡುಗೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಕಛೇರಿಯಲ್ಲಿ ಪ್ರಾಮಾಣೀಕವಾಗಿ ಕರ್ತವ್ಯ ನಿಷ್ಠೆಯನ್ನು ತನ್ನ ವೃತ್ತಿ ಜೀವನವನ್ನು ಮುಗಿಸಿದ ವಿಷ್ಣು ನಾಯ್ಕ ರವರಿಗೆ ಕಛೇರಿಯ ಎಲ್ಲಾ ಸಿಬ್ಬಂದಿಗಳು ಸೇರಿ ನೆನಪಿನ ದ್ಯೊತಕವಾಗಿ ಉಂಗುರವನ್ನು ತೊಡಿಸಿ ಸನ್ಮಾನಿಸಲಾಯಿತು.
ಸನ್ಮಾನಗೊಂಡ ವಿಷ್ಣು ನಾಯ್ಕ ಮಾತನಾಡಿ ಕಛೇರಿಯ ನಂಟನ್ನು ನೆನಪಿಸುತ್ತಾ, ತುಂಬಾ ಭಾವೋದ್ವೇಗಗೊಳಗಾಗಿ ತನ್ನ ಅನಸಿಕೆಯನ್ನು ಹೇಳಿಕೊಂಡರು.
ಈ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ನಾಯ್ಕ ಮಾತನಾಡಿ ವಿಷ್ಣುವಿನ ಕರ್ತವ್ಯ ನಿಷ್ಠೆಯನ್ನು ನಾವೆಲ್ಲಾ ಮೆಚ್ಚಿಕೊಳ್ಳಬೇಕು. ಅವರ ನಿವೃತ್ತಿ ಜೀವನ ಸುಖಕರವಾಗಲಿ ಎಂದು Àರು.
ಸಮಾರಂಭದಲ್ಲಿ ವಿಷ್ಣು ನಾಯ್ಕ ರವರ ಕುರಿತು ಕಛೇರಿಯ ಸಿಬ್ಬಂದಿಗಳಾದ ಉಷಾ ಟಿ., ಕುಮಾರಿ ಸವಿತಾ ಗೌಡ, ಹನ್ಮಂತ ಗೌಡ, ಪಿಡಿಓ ವಿ.ಎ..ಪಟಗಾರ ಮಾತನಾಡಿದರು.
ಸಮಾರಂಭದಲ್ಲಿ ಉದ್ಯೋಗ ಖಾತ್ರಿಯ ಸಹಾಯಕ ನಿರ್ದೇಶಕರಾದ ಕೃಪ್ಣಾನಂದ ಕೆ., ಕಛೇರಿಯ ವ್ಯವಸ್ಥಾಪಕರಾದ ಗಣಪತಿ ನಾಯ್ಕ, ಪಿಡಿಓ ಕಿರಣಕುಮಾರ, ನಾಗರಾಜ ವಿ., ಶ್ರೀಧರ ಭಟ್, ಗೀತಾ ಹೆಗಡೆ ಹಾಗೂ ಕಛೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿಷ್ಣು ನಾಯ್ಕ ರವರ ಜೊತೆ ಕಳೆದ 9 ವರ್ಷಗಳಿಂದ ಆತ್ಮೀಯವಾಗಿ ಒಡನಾಟ, ಕಛೇರಿ ಸಂಬಂಧ ಹೊಂದಿರುವ ಯುವಜನ ಕ್ರೀಡಾಧಿಕಾರಿ ಸುಧೀಶ ನಾಯ್ಕ ರವರು ವಿಷ್ಣು ನಾಯ್ಕ ರವರ ಜೀವನದ ಸವಿಸ್ತಾರ ಮಾಹಿತಿಯನ್ನು ತಿಳಿಸಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.
Leave a Comment