ಹೊನ್ನಾವರ “ಇಂದಿನ ಜಗತ್ತು ತೀವ್ರ ಸ್ಫರ್ಧಾತ್ಮಕವಾಗಿದ್ದು, ಅಂಕಗಳಿಕೆಯ ಕಲಿಕೆಗಿಂತ, ಉದ್ಯೋಗಾವಕಾಶಗಳನ್ನು ತಂದುಕೊಡುವ ಜ್ಞಾನಕೇಂದ್ರತ ಕಲಿಕೆ ತುಂಬ ಮಹತ್ವಪೂರ್ಣವಾದದ್ದು” ಎಂದು ಬ್ರಹ್ಮಾವರದ ಸರೇನ ಸ್ಫರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ನಿರ್ದೇಶಕರಾದ ವಿ. ಚಂದ್ರಕಾಂತ ಹೇಳಿದರು. ಹೊನ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ಲೇಸ್ಮೆಂಟ್ ಸೆಲ್ ಏರ್ಪಡಿಸಿದ್ದ, ‘ನಾಗರಿಕ ಸೇವಾ ಪರೀಕ್ಷೆಗಳ ಸಿದ್ದತೆ’ಯ ಕುರಿತಾದ ಒಂದು ದಿನದ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ನಾಗರಿಕ ಸೇವೆಯ ಪರೀಕ್ಷೆ ಎದುರಿಸುವಲ್ಲಿ ಕರ್ನಾಟಕದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಈ ನಿಟ್ಟಿನಲ್ಲಿ ಪರೀಕ್ಷಾ ತಯಾರಿಯ ಕುರಿತು ನಿರಂತರ ಮಾರ್ಗದರ್ಶನದ ಅಗತ್ಯವಿದೆ ಎಂದರು. ಕಾರ್ಯಗಾರವನ್ನು ಉದ್ಘಾಟಿಸಿ ಮಾತಾನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಮಂಗಲಾ ಬಿ. ನಾಯಕ ರವರು “ಸ್ಫರ್ಧಾತ್ಮಕ ಪರೀಕ್ಷಾ ತಯಾರಿಗೆ ಪದವಿ ಸರಿಯಾದ ಸಮಯವಾಗಿದ್ದು, ಈಗಿನಿಂದಲೇ ಸಿದ್ದರಾಗಬೇಕಿದೆ” ಎಂದರು. ಅತಿಥಿಗಳಾಗಿ ಭಾಗವಹಿಸಿದ ಕಾಲೇಜಿನ ಗ್ರಂಥಪಾಲಕರಾದ ಕಾಳಾ ನಾಯ್ಕಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವವರು ಗ್ರಂಥಾಲಯದ ಪುಸ್ತಕಗಳ ಸರಿಯಾದ ಬಳಕೆ ಮಾಡಿಕೊಳ್ಳಬೇಕು ಎಂದರು. ಇನ್ನೊಬ್ಬ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ವಿವೇಕ ಕಾಮತ ರವರು ಮಾನಸಿಕ ಸಾಮಥ್ರ್ಯದ ಕುರಿತು ತರಬೇತಿ ನೀಡಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಟಿ. ಶ್ರೀನಿವಾಸ, ಸಹಾಯಕ ಪ್ರಾಧ್ಯಾಪಕರುಗಳಾದ ಕು. ಮಾದಾಂಬಿಕ ಜಿ. ಬಿ., ಕು. ವಿನಿತಾ ವೆಂಕಟಪ್ಪ, ಕು. ಜೀನತ್, ಕು. ಶ್ವೇತಾ ಉಪಸ್ಥಿತರಿದ್ದರು. ಉದ್ಯೋಗ ಮಾಹಿತಿ ಘಟಕದ ಸಂಯೋಜಕರಾದ ಕು. ಕಾವ್ಯಶ್ರೀ ನಾಯ್ಕ, ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಅಂತಿಮ ಬಿ.ಕಾಂ. ವಿದ್ಯಾರ್ಥಿನಿಯರಾದ ಕು.ಲಕ್ಷ್ಮಿ ವಂದಿಸಿದರು ಹಾಗೂ ಕು. ದಿವ್ಯಾ ನಿರೂಪಿಸಿದರು.
Leave a Comment