ಹಳಿಯಾಳ: ನಗರ ಭಾಗಗಳಲ್ಲಿ ಮಾತ್ರ ಕೇಂದ್ರಿಕೃತವಾಗುತ್ತಿರುವ ಉದ್ಯೋಗಗಳು, ಕಂಪೆನಿಗಳು ಗ್ರಾಮೀಣ ಭಾಗದತ್ತು ಆಕರ್ಷಿತರಾಗಬೇಕು ಹಾಗೂ ಗ್ರಾಮೀಣ ಭಾಗಗಳಲ್ಲಿ ಹೆಚ್ಚೆಚ್ಚು ಉದ್ಯೋಗಗಳು ಸೃಷ್ಠಿಯಾಗಬೇಕು ಆ ನಿಟ್ಟಿನಲ್ಲಿ ಸರ್ಕಾರ ನೂತನ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ದಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ಕೆಎಲ್ಎಸ್ ಮಹಾವಿದ್ಯಾಲಯದಲ್ಲಿ ನಡೆದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆಯ 14ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಆದರ್ಶ ಗ್ರಾಮಗಳನ್ನಾಗಿ ಮಾಡುವ ಮಹತ್ವದ ಉದ್ದೇಶದಿಂದ ಹಳಿಯಾಳ ತಾಲೂಕಿನ ಜನಗಾ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ದೊಡಕೊಪ್ಪ ಹಾಗೂ ಬಂಟರಗಾಳಿ ಈ 2 ಗ್ರಾಮಗಳನ್ನು ದತ್ತು ಸ್ವೀಕರಿಸಿ ಸಿಬಿಡಿ ಆರ್ಸೆಟ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಚಿವ ದೇಶಪಾಂಡೆ ಮಾತನಾಡಿದರು. ಕೆನರಾಬ್ಯಾಂಕ್ ದೇಶಪಾಂಡೆ ಆರ್ಸೆಟಿ ಕಾರ್ಯಕಾರಣಿ ಮಂಡಳಿ ಅಧ್ಯಕ್ಷ ಪ್ರಸಾದ ಆರ್ ದೇಶಪಾಂಡೆ ಅವರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಮೂಲಕ ಈ ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದು ಸಂತೋಷದ ವಿಷಯ. ಯುವಕರು ಹೀಗೆ ಸಮಾಜಮುಖಿ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದರು. 2018ರಿಂದ 2 ವರ್ಷಗಳ ಅವಧಿಗೆ ಈ 2 ಗ್ರಾಮಗಳನ್ನು ದತ್ತು ತೆಗೆದುಕೊಳ್ಳಲಾಗಿದೆ. ಇಲ್ಲಿ ಆರೋಗ್ಯ,ಶಿಕ್ಷಣ,ಆರ್ಥಿಕ,ಪರಿಸರ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಜಾಗೃತಿ. ಸ್ವಸಹಾಯ ಸಂಘ ಮತ್ತು ಯುವಕ ಮಂಡಳ ರಚನೆ ಮಾಡುವುದು ಪ್ರತಿಯೊಂದು ಹಂತದಲ್ಲಿ ಅರಿವು ಮೂಡಿಸಿ ಸಾಮಾಜಿಕ ಜ್ಞಾನ ನೀಡುವುದು ಹಾಗೂ ಮೂಲಸೌಕರ್ಯಗಳನ್ನು ಒದಗಿಸಿ ಆದರ್ಶ ಗ್ರಾಮಗಳನ್ನಾಗಿ ಪರಿವರ್ತಿಸಲಾಗುವುದೆಂದರು. ವಿಶ್ವ ಸಣ್ಣ ಹಳ್ಳಿಯಾಗಿದೆ. ಸ್ಪರ್ದೆ ತೀವೃವಾಗಿದೆ. ಗುಣಮಟ್ಟಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಪ್ರತಿಯೊಬ್ಬರು ದೂರದೃಷ್ಠಿಕೊನ ಹೊಂದಿ ಅಭಿವೃದ್ದಿ ಸಾಧಿಸಿರಿ ಎಂದು ದೇಶಪಾಂಡೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಆರ್ಸೆಟಿಯ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಸಾದ್ ದೇಶಪಾಂಡೆ, ಸಂಸ್ಥೆಯ ನಿರ್ದೇಶಕ ನಿತ್ಯಾನಂದ ವೈದ್ಯ, ಹಿರಿಯ ಅಧಿಕಾರಿ ಅನಂತಯ್ಯಾ ಆಚಾರಿ, ಜಿಪಂ ಉಪಾದ್ಯಕ್ಷ ಸಂತೋಷ ರೆಣಕೆ, ಬೆಂಗಳೂರಿನ ಖ್ಯಾತ ಸೆಲ್ಕೊ ಇಂಡಿಯಾ ಸಿಇಓ ಡಾ.ಹರೀಶ ಹಂದೆ, ಕೆನರಾ ಬ್ಯಾಂಕ್ ವೃತ್ತ ಕಛೇರಿ ಮಂಗಳೂರಿನ ಡಿಜಿಎಮ್ ವಿ. ರಾಮಚಂದ್ರ, ಎಜಿಎಮ್ ಬಿ.ಪಾಶ್ವನಾಥ, ಕೃಷ್ಣಾ ಕುಲಕರ್ಣಿ, ಆರ್ಸೆಟ್ ರಾಜ್ಯ ನಿರ್ದೇಶಕ ರಾಮಕೃಷ್ಣ ಮಾನೆ, ಶ್ಯಾಮ ಕಾಮತ, ನಬಾರ್ಡ ಜಿಲ್ಲಾ ಅಧಿಕಾರಿ ಯೋಗೇಶ ಎಸ್ಎಲ್, ಲೀಡ ಬ್ಯಾಂಕನ ಪಿಂಜಾರ ಮೊದಲಾದ ಗಣ್ಯರು ಇದ್ದರು.
Leave a Comment