ಹೊನ್ನಾವರ : ತಹಸೀಲ್ದಾರರ ಕಾರ್ಯಾಲಯದಲ್ಲಿ ಶನಿವಾರ ಸರ್ವೆ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಶಾಸಕ ದಿನಕರ ಶೆಟ್ಟಿ ನಿಗದಿತ ಸಮಯದಲ್ಲಿ ಕೆಡಿಟಿ, ನಕಾಶೆ, ಪೋಡಿ ಮುಂತಾದ ಪ್ರಕರಣಗಳನ್ನು ತಕ್ಷಣ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ಹೊನ್ನಾವರ : ತಹಸೀಲ್ದಾರರ ಕಾರ್ಯಾಲಯದಲ್ಲಿ ಶನಿವಾರ ಸರ್ವೆ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಶಾಸಕ ದಿನಕರ ಶೆಟ್ಟಿ ನಿಗದಿತ ಸಮಯದಲ್ಲಿ ಕೆಡಿಟಿ, ನಕಾಶೆ, ಪೋಡಿ ಮುಂತಾದ ಪ್ರಕರಣಗಳನ್ನು ತಕ್ಷಣ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಬಾಳೆಗದ್ದೆಯ ಮಹಿಳೆಯೊಬ್ಬಳು ತನ್ನ ಜಮೀನಿನ ಕಾಗದ ಪತ್ರಗಳಿಗಾಗಿ 2016 ರಿಂದ ತಿರುಗುತ್ತಿದ್ದು ಅವನ್ನು ಕೊಡದೇ ಸತಾಯಿಸಲಾಗುತ್ತಿದೆ ಎಂದು ಶಾಸಕರ ಗಮನಕ್ಕೆ ತಂದರು. ಅದಕ್ಕೆ ಸ್ಪಂದಿಸಿದ ಅವರು ಒಂದುವಾರದಲ್ಲಿ ಅವರು ಕೇಳಿದ ಕಾಗದಪತ್ರಗಳನ್ನು ಒದಗಿಸುವಂತೆ ಸೂಚಿಸಿದರು. ಹಳದೀಪುರ ಹಾಗೂ ಕಡತೋಕಾದಲ್ಲಿ ಆಶ್ರಯ ಮನೆಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ತಾ.ಪಂ. ಅವರೋಂದಿಗೆ ಚರ್ಚಿಸಿ ಬಗೆ ಹರಿಸುವ ಕೆಲಸ ಮಾಡಿದರು. ತಹಸೀಲ್ದಾರ ಮಂಜುಳಾ ಭಜಂತ್ರಿ, ತಾ.ಪ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಈ ಸಂದರ್ಭದಲ್ಲಿ ಉಮೇಶ ನಾಯ್ಕ, ಸುಬ್ರಾಯ ನಾಯ್ಕ, ಜಿ.ಕೆ.ಶೇಟ್ ಕರ್ಕಿ ಕೊಂಡಕೆರೆ ಟಿ.ಎಸ್.ಹೆಗಡೆ, ಸುರೇಶ ಶೆಟ್ಟಿ, ಎಂ.ಎಸ್.ಹೆಗಡೆ ಕಣ್ಣಿ, ಪರಮೇಶ್ವರ ನಾಯ್ಕ, ಉಲ್ಲಾಸ ಶಾನಭಾಗ,ಸುರೇಶ ಸಾರಂಗ, ಮತ್ತಿತರರು ಉಪಸ್ಥಿತರಿದ್ದರು.
Leave a Comment