ಹೊನ್ನಾವರ ,ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ‘ಸುಧನ್ವ ಮೋಕ್ಷ’ ತಾಳಮದ್ದಳೆ ಕಾರ್ಯಕ್ರಮವು ಪ್ರೇಕ್ಷಕರ ಮನ ಗೆದ್ದಿತು. ಮಹಾವಿದ್ಯಾಲಯದ ಉಪನ್ಯಾಸಕರೇ ಈ ಪ್ರಸಂಗದ ಅರ್ಥದಾರಿಗಳಾದದ್ದು ವಿಶೇಷವಾಗಿತ್ತು.
ಡಾ. ಎಂ. ಆರ್. ನಾಯಕ-ಸುಧನ್ವ, ಪ್ರೊ. ಜಿ.ಎಸ್. ಹೆಗಡೆ-ಅರ್ಜುನ, ಪ್ರೊ. ಎಂ. ಜಿ. ಹೆಗಡೆ-ಕೃಷ್ಣ, ಪ್ರೊ. ನಾಗರಾಜ ಹೆಗಡೆ ಅಪಗಾಲ್-ಹಂಸಧ್ವಜ, ಉಪನ್ಯಾಸಕರಾದ ವಿನಾಯಕ ಭಟ್ಟ-ಪ್ರಭಾವತಿಯಾಗಿ ಕೇಳುಗರ ಮನಸೂರೆಗೊಂಡರು. ಹಿಮ್ಮೇಳದಲ್ಲಿ . ಕೃಷ್ಣ ಭಂಡಾರಿ ಗುಣವಂತೆ ಹಾಗೂ ರಾಮ ಹೆಗಡೆ ಕೆರೆಮನೆ ಇವರು ಭಾಗವತರಾಗಿ ಸಹಕರಿಸಿದರು. ಪ್ರಾಚಾರ್ಯರಾದ ಎಂ. ಎಚ್. ಭಟ್ಟ ಇವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Leave a Comment