ಹೊನ್ನಾವರ: ಮಾನಸಿಕ ಅನಾರೋಗ್ಯಕ್ಕೆ ಒಳಗಾಗಿದವರನ್ನು ಪಶುಗಳಂತೆ, ವಸ್ತುಗಳಂತೆ ಕಾಣದೇ ಮಾನವೀಯ ಅಂತಕರಣದಿಂದ ಕಾಣಬೇಕು ಎಂದು ಹಿರಿಯ ಸಿವಿಲ್ ನ್ಯಾಯಧೀಶ ಎಮ್.ವಿ. ಚೆನ್ನಕೇಶವ ರೆಡ್ಡಿ ಅಭಿಪ್ರಾಯಪಟ್ಟರು.
ಅವರು ಮಾನಸಿಕ ಆರೋಗ್ಯ ಕಾಯ್ದೆ ಅನುಷ್ಠಾನದ ಬಗ್ಗೆ ತಾಲೂಕಾ ಕಾನೂನು ನೆರವು ಸಮಿತಿ ಆಯೋಜಿಸಿದ ಸಭೆಯಲ್ಲಿ ಮಾತನಾಡುತ್ತಿದ್ದರು.
ಮಾನಸಿಕ ಆರೋಗ್ಯ ಕಾಯಿದೆ ಅನುಷ್ಠಾನ ಜಾರಿಗೆ ಬಗ್ಗೆ ವಿವಧ ಇಲಾಖೆ, ಸಂಘ-ಸಂಸ್ಥೆ ಹಾಗೂ ಸಾರ್ವಜನಿಕರ ಮತ್ತು ಅಧಿಕಾರಿಗಳ ಜವಾಬ್ದಾರಿಯ ಕುರಿತು ವಿವರಿಸಿದರು.
ಜೆ.ಎಮ್.ಎಫ್.ಸಿ. ನ್ಯಾಯಾಧೀಶ ಮಧುಕರ ಪಿ. ಭಾಗ್ವತ ಮಾತನಾಡಿ ಮಾನಸಿಕ ಅಸ್ವಸ್ಥರ ಚಿಕಿತ್ಸೆ ಮತ್ತು ಪುನರ್ವಸತಿ ಕುರಿತು ಕಾನೂನಿನಲ್ಲಿ ಇರುವ ಅವಕಾಶ ವಿವರಿಸಿ ಸರ್ಕಾರದ ಯೋಜನೆಯನ್ನು ಅವಶ್ಯಕ ವ್ಯಕ್ತಿಗಳಿಗೆ ಮುಟ್ಟಿಸುವುದು ಬಹುದೊಡ್ಡ ಸೇವೆ ಎಂದರು.
ಜೀವನಧಾರ ಟ್ರಸ್ಟ್ ಅಧ್ಯಕ್ಷ ಜಾಕಿ ಜೊರಾನ್ ಡಿಸೋಜಾ ಮಾತನಾಡಿ ಅಲೆಮಾರಿ ಮಾನಸಿಕ ಅಸ್ವಸ್ಥರ ಸ್ಥಳಾಂತರ ಮತ್ತು ಪುನರ್ವಸತಿ ಕುರಿತು ಸಂಸ್ಥೆ ನಡೆಸಿ ಬಂದ ಚಟುವಟಿಕೆ ಹಾಗೂ ಎದುರಾಗುತ್ತಿರುವ ಸಮಸ್ಯೆ ಕುರಿತು ಮಾಹಿತಿ ನೀಡಿದರು.
ಪಿ.ಎಸ್.ಐ. ಆನಂದ ಮೂರ್ತಿ ಮಾತನಾಡಿ ಅಸ್ವಸ್ಥರ ಸ್ಥಳಾಂತರ ಮತ್ತು ಪುನರ್ವಸತಿ ಕುರಿತು ಇಲಾಖೆ ಕಾಳಜಿ ಹೊಂದಿದ್ದು, ಸ್ಥಳಾಂತರಕ್ಕೆ ಇಲಾಖೆಯ ರಕ್ಷಣೆ ನೀಡುವಲ್ಲಿ ಇರುವ ಕಾನೂನು ಅಡಚಣೆ ಕುರಿತು ವಿವರಿಸಿದರು.
ತಹಶೀಲ್ದಾರ ಮಂಜುಳಾ ಬಜಂತ್ರಿ, ಶಿಶುಅಭಿವೃದ್ಧಿ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸಮಾಜ ಕಲ್ಯಾಣ ಅಧಿಕಾರಿಗಳು, ಡಾ|| ಕಿರಣ ಬಳಕೂರು, ನಿವೃತ್ತ ಪ್ರಾಚಾರ್ಯ ರಾಷ್ಟ್ರಪ್ರಶಸ್ತಿ ಪುರಸ್ಕøತ ಎಸ್.ಜೆ. ಕೈರನ್, ಡಾ|| ರಂಗನಾಥ ಪೂಜಾರಿ, ಹೆಚ್ಚುವರಿ ಸರ್ಕಾರಿ ಅಭಿಯೋಜಕ ಪಿ.ಎಲ್. ಭಟ್ಟ, ಡಾ|| ರಾಜೇಶ ಕಿಣಿ, ಎಂ.ಎನ್. ಸುಬ್ರಹ್ಮಣ್ಯ ಉಪಸ್ಥಿತರಿದ್ದರು.
ವಕೀಲರ ಸಂಘದ ಕಾರ್ಯದರ್ಶಿ ಸೂರಜ್ ನಾಯ್ಕ ಸಭೆಯನ್ನು ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
ಸರ್ಕಾರಿ ಅಭಿಯೋಜಕ ಭದರಿನಾಥ ನಾಯರಿ, ಹೆಚ್ಚುವರಿ ಸರ್ಕಾರಿ ವಕೀಲ ಪ್ರಮೋದ ಎಲ್.ಭಟ್ಟ, ವಕೀಲರ ಸಂಘದ ಕಾರ್ಯದರ್ಶಿ ಉಪಸ್ಥಿತರಿದ್ದರು.
Leave a Comment