ಹೊನ್ನಾವರ :ಇಲ್ಲಿನ ಹಡಿನಬಾಳದ ರಾಗಶ್ರೀ ಸಂಗೀತ ಮತ್ತು ಸಾಂಸ್ಕøತಿಕ ಸಂಸ್ಥೆಯ ಶಿಷ್ಯಂದಿರು ಸೇರಿ ಶ್ರೀ ಸುಬ್ರಹ್ಮಣ್ಯ ಪ.ಪೂ. ಕಾಲೇಜ್ನಲ್ಲಿಗುರುಪೂರ್ಣಿಮಾ ಹಾಗೂ ಸಂಗೀತಕಾರ್ಯಕ್ರಮವನ್ನು ಶೃದ್ಧಾ, ಭಕ್ತಿಯಿಂದ ನೆರವೇರಿಸಿದರು.ರಾಜ್ಯ ಪ್ರಶಸ್ತಿ ಪುರಸ್ಕøತರಾದ ಸುಬ್ರಾಯ ಭಾಗವತಕಪ್ಪೆಕೇರಿ, ಉದ್ಘಾಟಿಸಿ ನಂತರ ಮಾತನಾಡಿ ಆಕಾಶ ಪಾತಾಳ ಭೂಲೋಕಗಳಿಗಿಂತ ಭಿನ್ನವಾದದ್ದು ಸಂಗೀತ ಲೋಕ ಈ ಲೋಕ ಪ್ರವೇಶಿಸಿದರೆ ಆದಿ-ಅಂತ್ಯಗಳಲ್ಲಿ ಇದು ಶಾಶ್ವತ ನೆಮ್ಮದಿ ಕೊಡುವ ಲೋಕ ಸಮರ್ಥಗುರು ಶಿಷ್ಯನಿಗೆ ಸಂಗೀತ ಲೋಕ ಪ್ರವೇಶ ಮಾಡಿಸಬಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಪ್ರಾಧ್ಯಾಪಕಎಸ್.ಎಂ.ಹೆಗಡೆಉಡುಪಿ ಮಾತನಾಡಿ ಸಂಗೀತ, ಸಾಹಿತ್ಯ, ಕಲೆಯಗಂಧವಿಲ್ಲದ ವ್ಯಕ್ತಿ ಪಶುವಿನಂತೆಎಂದು ಹೇಳಿ ರಾಗಶ್ರೀ ಶಿಷ್ಯರ ಈ ಕಾರ್ಯಕ್ರಮದಕುರಿತು ಮೆಚ್ಚುಗೆಯ ಮಾತನಾಡಿದರು. ವಿದ್ವಾನ್ಗಣಪತಿ ಭಟ್ಟಗುರು ಪೂರ್ಣಿಮ ಆಚರಿಸಿ ಸರ್ವಮಾನ್ಯ ಸಂಗೀತದ ಗುರುಗಳಿಗೆ ಗೌರವ ಸಲ್ಲಿಸುತ್ತಿರುವುದು ಮಹಾಗುರು ವ್ಯಾಸರಿಗೆ ಸಂದಗೌರವಎಂದು ರಾಗಶ್ರೀಯ ಕಾರ್ಯವನ್ನು ಶ್ಲಾಘಿಸಿದರು. ಪಂ| ಎನ್.ಎಸ್. ಹೆಗಡೆ ಸತತ ಪರಿಶ್ರಮದಿಂದಕಲಾದೇವತೆ ಒಲಿಸಿಕೊಳ್ಳಲು ಸಾಧ್ಯಎಂದರೆ,
ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ವಿದ್ವಾನ್ ಶಿವಾನಂದ ಭಟ್ಟ ಮಾತನಾಡಿ ಸಂಗೀತಎಲ್ಲರನ್ನು ಕೈ ಬೀಸಿ ಕರೆಯುತ್ತದೆಆದರೆ ಕೆಲವು ಜನರನ್ನು ಮಾತ್ರ ತನ್ನೊಡಲೊಳಗೆ ಇಟ್ಟುಕೊಳ್ಳುತ್ತದೆ.ಸಂಗೀತದ ಒಲವಿದ್ದಾಗ್ಯೂಪ್ರಯತ್ನವಿಲ್ಲದಿದ್ದರೆಅದುಎಂದುಒಲಿಯುವುದಿಲ್ಲ.ಪ್ರಯತ್ನಪಟ್ಟು ಸಂಗೀತ ಕಲೆ ಬೆಳೆಸಿಕೊಳ್ಳಬೇಕು ಎಂದ Àರು.
ಇದೇ ಸಂದರ್ಭದಲ್ಲಿ ಪಂ| ಎನ್.ಎಸ್. ಹೆಗಡೆ ಹಾಗೂ ಡಾ| ಅಶೋಕ ಹುಗ್ಗಣ್ಣನವರಿಗೆ ಶಿವಾನಂದ ಭಟ್ಟ, ಎನ್.ಜಿ. ಹೆಗಡೆ, ಹರಿಶ್ಚಂದ್ರ ನಾಯ್ಕ ಹಾಗೂ ರಾಗಶ್ರೀ ಶಿಷ್ಯರು ಸೇರಿಗುರುವಂದನೆ ಸಲ್ಲಿಸಿದರು.ಇದರ ನಿಮಿತ್ತ ಏರ್ಪಡಿಸಿದ ಸಂಗೀತಕಾರ್ಯಕ್ರಮದಲ್ಲಿ ಶ್ರೀಲತಾ ಗುರುರಾಜ ಹೆಗಡೆ ಹಾಗೂ ತಿಮ್ಮಣ್ಣ ಹೆಗಡೆ ಹಾಗೂ ಹಿರಿಯಕಲಾವಿದರಾದಡಾ| ಅಶೋಕ ಹುಗ್ಗಣ್ಣನವರ ಸಂಗೀತಕಾರ್ಯಕ್ರಮ ನಡೆಯಿತು.ಡಾ| ಅಶೋಕ ಹುಗ್ಗಣ್ಣನವರುರಾಗ ರಾಗಶ್ರೀಯನ್ನು ತಮ್ಮ ಆಳ ಪಾಂಡಿತ್ಯದೊಂದಿಗೆ ಹಾಡಿ ಭೈರವಿಯಲ್ಲಿ ವಚನಗಳನ್ನು ಹಾಡಿಕಾರ್ಯಕ್ರಮ ಸಂಪನ್ನಗೊಳಿಸಿದರು.ಇವರಿಗೆ ಪಂ| ಎನ್.ಎಸ್. ಹೆಗಡೆತಬಲಾ ಸಾಥನ್ನು ನೀಡಿದರು. ಎನ್.ಜಿ. ಹೆಗಡೆ, ಗುರುರಾಜ ಹೆಗಡೆತಬಲಾ ಸಾಥ್ನ್ನು, ವಿಶ್ವೇಶ್ವರ ಭಟ್ಟಖರ್ವಾಹಾಗೂ ಹರಿಶ್ಚಂದ್ರ ನಾಯ್ಕಸಂವಾದಿನಿ ಸಾಥ ನೀಡಿದರು.ರಾಗಶ್ರೀಯ ಶಿಷ್ಯರಾದ ವಿನಾಯಕ ಭಟ್ಟ, ಸಂಗೀತಾ ನಾಯ್ಕ, ಸೌಮ್ಯ ಶೇಟ, ವಿನೋದ ಹೊನ್ನಾವರ, ಯೋಗಾನಂದ ಭಟ್ಟ, ರಂಜಿತಾ ನಾಯ್ಕಕಾರ್ಯಕ್ರಮವನ್ನುಅಚ್ಚುಕಟ್ಟಾಗಿ ನಡೆಸಿದರು.
Leave a Comment