ಹೊನ್ನಾವರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ‘ಸ್ವಚ್ಛತಾ ಪಾಕ್ಷಿಕ’ ಕಾರ್ಯಕ್ರಮದ ಉದ್ಘಾಟನೆಯು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾವರ, ರಾಷ್ಟೀಯ ಸೇವಾ ಯೋಜನಾ ಘಟಕದಡಿಯಲ್ಲಿ É ನಡೆಯಿತು.
ದೀಪ ಬೆಳಗುವುದರ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಮಂಗಲಾ ಬಿ ನಾಯ್ಕ, ರಾಷ್ಟೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಮತ್ತು ಶ್ರದ್ಧೆಯನ್ನು ಬೆಳೆಸುವುದರ ಜೊತೆಗೆ ಸ್ವಚ್ಛತಾ ಪಾಕ್ಷಿಕಗಳಂತಹ ಅಭಿಯಾನಗಳು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿಯನ್ನು ಬೆಳೆಸುತ್ತದೆ ಎಂದು ಅಭಿಪ್ರಾಯ ಪಟ್ಟರು.
ಉಪನ್ಯಾಸಕರಾಗಿ ಆಗಮಿಸಿದ ಪ್ರೊ. ಶ್ವೇತ ಎಂ, ಮಾತನಾಡಿ ನಮ್ಮ ಸ್ವಚ್ಛತೆಯ ಜೊತೆಗೆ ನಮ್ಮೂರಿನ ಸ್ವಚ್ಛತೆಯು ಸಹ ವಿದ್ಯಾವಂತರಾದ ನಮ್ಮೆಲ್ಲರ ಜವಬ್ದಾರಿ, ಇದು ಎಲ್ಲರ ಸಹಕಾರದೊಂದಿಗೆ ಮಾತ್ರ ಸಾಧ್ಯ ಎಂದರು. ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಪ್ರೊ. ನಾಗೇಶ ಶೆಟ್ಟಿ ಮಾತನಾಡಿ ಯುವ ಜನತೆಯಲ್ಲಿ ಬಾಹ್ಯ ಸ್ವಚ್ಛತೆಯ ಜೊತೆಗೆ ಆಂತರಿಕ ಸ್ವಚ್ಛತೆಯ ಅರಿವು ಮೂಡಿಸುವ ಅಗತ್ಯತೆಗಳ ಬಗ್ಗೆ ತಿಳಿಸಿದರು. ರಾಷ್ಟೀಯ ಸೇವಾ ಯೋಜನಾಧಿಕಾರಿಗಳಾದ ಪ್ರೊ. ವಿಶ್ವನಾಥ ನಾಯ್ಕ ಸ್ವಾಗತಿಸಿದರು ಮತ್ತು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕು. ಸಂಗೀತ ಮೇಸ್ತ ವಂದಿಸಿದರು ಮತ್ತು ಕು. ಕವಿತಾ ಮೇಸ್ತ ನಿರೂಪಿಸಿದರು.
Leave a Comment