ಹೊನ್ನಾವರ: ವ್ಯಕ್ತಿಯೊರ್ವ ನಕಲಿ ದಾಖಲೆ ಸ್ರಷ್ಟಿಸಿ ವಕಿಲರ ಸಂಘಕ್ಕೆ ವಂಚನೆ ನಡೆಸಿದ್ದಾರೆ ಎನ್ನುವ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣದ ಗಾಂಧಿನಗರದ ನಿವಾಸಿ ರಾಮಚಂದ್ರ ನಾಯ್ಕ ಆರೊಪಿತ ವ್ಯಕ್ತಿಯಾಗಿದ್ದು ವಕೀಲರ ಸಂಘದ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದು ಕಳೆದ 3-4 ವರ್ಷಗಳಿಂದ ವಕೀಲರ ಸಂಘದಿಂದ ಕನಾಟಕ ಬಾರ್ ಕೌನ್ಸಿಲ್ ಬೆಂಗಳೂರಿನ ವಕೀಲರ ಕಲ್ಯಾಣ ನಿಧಿಗೆ ಪ್ರತಿವರ್ಷ ಹಣತುಂಬುತ್ತಾ ಬಂದಿದ್ದ ಎನ್ನಲಾಗಿದೆ. 2017-2018ರಲ್ಲಿ ತುಂಬ ಬೇಕಿದ್ದ ಹಣವನ್ನು ಹೊನ್ನಾವರ ವಕೀಲರ ಸಂಘದವರು ಆರೋಪಿತ ರಾಮಚಂದ್ರ ನಾಯ್ಕನನ್ನು ನಂಬಿ 90 ಸಾವಿರ ಹಣಕಟ್ಟಲು ನೀಡಿದ್ದು ಸಂಘಕ್ಕೆ ಮೋಸÀ ಮಾಡುವ ಉದ್ದೇಶದಿಂದ ಹಣವನ್ನು ತುಂಬಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ವಕೀಲರಾದ ಸುರಜ್ ನಾಯ್ಕ ಅವರುÀ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಹೊನ್ನಾವರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ.
Leave a Comment