ಗುರುದೀಕ್ಷೆ ಪಡೆದು 40 ವರ್ಷ ಪೂರೈಸಿದ ಜಿಲ್ಲೆಯ ಪ್ರಥಮ ಗುರು ರೇ. ಫಾದರ ಎಂಟನಿ ರೊಡ್ರಿಗಿಸ್ ಅವರ `ಮಾಣಿಕ್ಯೋತ್ಸವ’ ಸಂಭ್ರಮ ಹಾಗೂ ಅಭಿನಂದನಾ ಕಾರ್ಯಕ್ರಮ ಸೆ.23 ರಂದು ತಾಲೂಕಿನ ಹಡಿನಬಾಳದ ಸೆಂಟ್ ಫ್ರಾನ್ಸಿಸ್ ಆಸಿಸಿ ಚರ್ಚಿನಲ್ಲಿ ನಡೆಯಲಿದೆ.
ತಾಲೂಕಿನ ಸಾನಾಮೋಟಾ ಎಂಬ ಚಿಕ್ಕ ಹಳ್ಳಿಯಲ್ಲಿ ಹುಟ್ಟಿದ ರೇ. ಫಾದರ ಎಂಟನಿ ರೊಡ್ರಿಗಿಸ್ರವರು, ತಾಯಿ ಸಂತಾನ ಹಾಗೂ ತಂದೆ ದಿ. ರುಜಾರ ರೊಡ್ರಿಗಿಸ್ ಅವರ ಪ್ರಥಮ ಪುತ್ರನಾಗಿದ್ದಾರೆ. ಕಾರವಾರ ಕ್ಯಾಥೋಲಿಕ ಧರ್ಮ ಪ್ರಾಂತ್ಯದ ದೈವಾಧೀನ ಧರ್ಮಾಧ್ಯಕ್ಷರಾದ ಡಾ. ವಿಲಿಯಂ ಡಿ’ಮೆಲ್ಲೊರವರಿಂದ ಗುರುದೀಕ್ಷೆ ಪಡೆದ ಪ್ರಪ್ರಥಮ ಧರ್ಮಗುರುಗಳಾಗಿದ್ದಾರೆ. ಇವರು ಪ್ರಭು ಯೇಸು ಕ್ರಿಸ್ತರ ಸಂದೇಶ ಜಿಲ್ಲೆಯ 11 ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಸ್ತುತ ಹಡಿನಬಾಳ ಸೆಂಟ್ ಫ್ರಾನ್ಸಿಸ್ ಆಸಿಸಿ ಚರ್ಚಿನಲ್ಲಿ 2015 ರಿಂದ ತಮ್ಮ ಸೇವೆ ನೀಡುತ್ತಾ ಬಂದಿರುತ್ತಾರೆ.
ಅಂದು ಕಾರವಾರ ಧರ್ಮಪ್ರಾಂತ್ಯದ ಧರ್ಮಗುರುಗಳಾದ ಅತೀ ವಂದನೀಯ ಬಿಷಪ್ ಡೆರಿಕ್ ಫರ್ನಾಂಡಿಸ್ ಹಾಗೂ ಜಿಲ್ಲೆಯ ಧರ್ಮಗುರುಗಳು, ಭಗಿನಿಯರು, ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡು ಅಭಿನಂದನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಸಾವಿರಾರು ಜನರು ಸೇರಲಿದ್ದು, ಫಾ| ಎಂಟನಿ ರೊಡ್ರಿಗಿಸ್ರವರಿಗೆ ಶುಭಕೋರಲಿದ್ದಾರೆ ಎಂದು ಸೆಂಟ್ ಫ್ರಾನ್ಸಿಸ್ ಆಸಿಸಿ ಚರ್ಚಿನ ಪಾಲನ ಸಮಿತಿ ಹಾಗೂ ಕಮಿಟಿಯ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment