ಹಳಿಯಾಳ: ಸೋಮವಾರ ಸಾಯಂಕಾಲ ಹಳಿಯಾಳ ಪೋಲಿಸರು ನಡೆಸಿದ ಕ್ಷೀಪ್ರ ಕಾರ್ಯಾಚರಣೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ಮಟಕಾ(ಓಸಿ) ನಡೆಸುತ್ತಿದ್ದವನನ್ನು ಸೇರಿದಂತೆ ಇನ್ನಿಬ್ಬರು ಓಸಿ ಬರೆಯುತ್ತಿದ್ದವರನ್ನು ಬಂಧಿಸಿ ಅವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಳಿಯಾಳದ ಮಾರುಕಟ್ಟೆ ಪ್ರದೇಶದ ಮೊತಿಕೆರೆ ಸನಿಹದಲ್ಲಿರುವ ವಿಜಯ ಮೊಬೈಲ್ ಶಾಪ್ನಲ್ಲಿ ಕ್ರೀಕೆಟ್ ಬೆಟ್ಟಿಂಗ್, ಬಡ್ಡಿ ವ್ಯವಹಾರ ಹಾಗೂ ಓಸಿ ನಡೆಸಲಾಗುತ್ತಿದೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಪಿಐ ಮತ್ತು ಪಿಎಸ್ಐ
ಅವರು ತಮ್ಮ ಸಿಬ್ಬಂದಿಗಳೊಂದಿಗೆ ಹಠಾತ್ ದಾಳಿ ನಡೆಸಿ ಓಸಿ ಬರೆಯುತ್ತಿದ್ದ ಅಂಗಡಿ ಮಾಲಿಕ ದುರ್ಗಾನಗರ ರಹವಾಸಿ ವಿಜಯ ಮಹಾಬಳೇಶ್ವರ ಶಿರೋಢಕರನನ್ನು ಬಂಧಿಸಿ ಆತನಿಂದ 2600ರೂ ನಗದು ಹಾಗೂ ಓಸಿಗೆ ಬಳಸುತ್ತಿದ್ದ ಮೊಬೈಲ್ಅನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನೂ ಯಲ್ಲಾಪೂರ ನಾಕಾ ಬಳಿಯ ಪಾನ ಶಾಪ ನಡೆಸುತ್ತಿರುವ ಸಲ್ಮಾನ್ ಅಬ್ದುಲ್ರಶೀದ್ ಬಂಗಾಲಿ 8410ರೂ. ನಗದು ಹಾಗೂ ಗಣೇಶ ರಾಠೋಡನಿಂದ 1690 ನಗದು ಮೊಬೈಲ್ ಫೊನ್ಗಳನು ವಶಪಡಿಸಿಕೊಂಡು ಅವರ ವಿರುದ್ದ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆ ವೇಳೆ ಇವರು ಗೋವಾದ ವಸೀಮ್ ಎನ್ನುವಾತನಿಗೆ ಓಸಿ ನೀಡುತ್ತಿದ್ದರು ಎಂದು ಬಾಯ್ಬಿಟ್ಟಿದ್ದು ಆತನ ವಿರುದ್ದವು ಪ್ರಕರಣ ದಾಖಲಾಗಿದ್ದು ಪೋಲಿಸರು ತನಿಖೆ ಚುರುಕುಗೊಳಿಸಿದ್ದಾರೆ.
Leave a Comment