ಹಳಿಯಾಳ:- “ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ, ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ಪ್ರತಿಯೊಂದು ಮಗು ದೇಶದ ಆಸ್ತಿ ಆದ ಕಾರಣ ವಿದ್ಯಾರ್ಥಿಗಳು ಸರಿಯಾದ ಮಾರ್ಗದಲ್ಲಿ ನಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ವಿಮಲಾಬಾಯಿ ದೇಶಪಾಂಡೆ ಸ್ಕೂಲ್ ಆಫ್ಎಕ್ಸಲೆನ್ಸನ್ ಶಾಲೆಯ ಪ್ರಾಂಶುಪಾಲ ಸಿ. ಬಿ. ಪಾಟೀಲ ಕರೆ ನೀಡಿದರು.
ಹಳಿಯಾಳದ ವಿ.ಆರ್.ಡಿ.ಎಮ್ ಟ್ರಸ್ಟನ್ ವಿಮಲಾಬಾಯಿ ದೇಶಪಾಂಡೆ ಸ್ಕೂಲ್ ಆಫ್ಎಕ್ಸಲೆನ್ಸನ್ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉಧ್ಘಾಟಿಸಿ ಅವರು ಮಾತನಾಡಿದರು.
ಶಾಲೆಯ ಹಲವು ಶಿಕ್ಷಕರು ಪ್ರಾರ್ಥನಾಗೀತೆ ಹಾಗೂ ಜನುಮದಿನದ ಶುಭಾಶಯ ಗೀತೆ ಹಾಡಿ ಎಲ್ಲ ವಿದ್ಯಾರ್ಥಿಗಳಿಗೂ ಶುಭ ಹಾರೈಸಿದರು. ಶಾಲೆಯ ಎಲ್ಲ ಶಿಕ್ಷಕರು ಮಾನವೀಯ ಮೌಲ್ಯಾಧಾರಿತ ನಾಟಕ, ಹಾಡು ಏಕ ಪಾತ್ರಾಭಿನಯ ಹಾಗೂ ನೃತ್ಯವನ್ನು ಪ್ರಸ್ತುತ ಪಡಿಸುವ ಮೂಲಕ ಮಕ್ಕಳನ್ನು ರಂಜಿಸಿದರು.
ಸಭಾಕಾರ್ಯಕ್ರಮದ ನಂತರ ಎಲ್ಲ ತರಗತಿಯ ವಿದ್ಯಾರ್ಥಿಗಳಿಗೂ ಶಿಕ್ಷಕರು ಮನರಂಜನಾ ಆಟಗಳನ್ನು ಏರ್ಪಡಿಸಿದ್ದರು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ನೆಲ್ಸಿ ಫರ್ನಾಂಡಿಸ್ ಕಾರ್ಯಕ್ರಮ ನಿರ್ವಹಿಸಿದರು.
Leave a Comment