ಹಳಿಯಾಳ:- ರಾಜ್ಯ ವಕ್ಫ್ ಬೊರ್ಡ ಅಧಿನದಲ್ಲಿರುವ ಉತ್ತರ ಕನ್ನಡ ಜಿಲ್ಲೆ ಹಳಿಯಾಳದ ಅಂಜುಮನ್ ಸಂಸ್ಥೆಯ ಇಕ್ಬಾಲ್ ಎಜುಕೇಶನ್ ಸೋಸೈಟಿಯ ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ ಭಾನುವಾರ ಮತದಾನ ಶಾಂತಿಯುತವಾಗಿ ನಡೆದಿದ್ದು ಇದೆ ಪ್ರಥಮ ಬಾರಿಗೆ 15 ನೂತನ ಸದಸ್ಯರನ್ನು ಮತದಾನದ ಮೂಲಕ ಆಯ್ಕೆ ಮಾಡಲಾಗಿದೆ.
ಅತ್ಯಂತ ತುರುಸಿನಿಂದ ಕೂಡಿದ್ದ ಇಕ್ಬಾಲ್ ಎಜುಕೇಶನ್ ಸೋಸೈಟಿಯ ಚುನಾವಣೆಯಲ್ಲಿ ಒಟ್ಟೂ 1233 ಮತದಾರರಲ್ಲಿ 1119 ಮತದಾರರು ಮತದಾನ ಮಾಡಿದ್ದರು ಎಂದು ತಿಳಿಸಿದ ಚುನಾವಣಾಧಿಕಾರಿಯಾಗಿರುವ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಹಾಗೂ ಸಹಾಯಕ ಚುನಾವಣಾಧಿಕಾರಿ ತಾಜುದ್ದೀನ್ ಆಯ್ಕೆಗೊಂಡ ಸದಸ್ಯರ ಮಾಹಿತಿ ನೀಡಿದ್ದಾರೆ.
ವಿಜೇತರು:- ರಹಿಸ್ ಕೊಟುರ, ಅಬ್ದುಲ್ಅಲಿಂ ಬಸರಿಕಟ್ಟಿ, ಹಿದಾಯತುಲ್ಲಾ ಸಾವುಕಾರ, ಇಮ್ತಿಯಾಜ್ ಶೇಖ್, ಅಲಿಸಾಬ ಮುಲ್ಲಾ, ಅಬ್ದುಲ್ಸಲೆಂ ದಲಾಲ, ಮಹಮದಜಮೀಲ್ ಇಟ್ಟಂಗಿವಾಲೆ, ಮಮ್ಮದಜಾವಿದ ಬಿಡಿವಾಲೆ, ಮಹಮ್ಮದಗೌಸ ಮುಲ್ಲಾ, ಖಾಕೇಶಾ ಮಕಾನದಾರ, ಸಂಸ್ಥೆಯ ಮಾಜಿ ಅಧ್ಯಕ್ಷರಾದ ಎಲ್.ಎಸ್.ದಲಾಲ, ಮಹಬೂಬಸುಭಾನಿ ಹುಬ್ಬಳ್ಳಿ, ಅಬ್ದುಲ್ಖಾದರ(ರಾಜು) ಮುಲ್ಲಾ, ಸೈಯದಲಿ ಅಂಕೋಲೆಕರ ಹಾಗೂ ಇಮ್ರಾನ್ ಶೇಖ್ ಅವರುಗಳು ಇಕ್ಬಾಲ್ ಎಜುಕೇಶನ್ ಸೋಸೈಟಿಯ ಆಡಳಿತ ಮಂಡಳಿ ಚುನಾವಣೆಯಲ್ಲಿ ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿ ಅಬ್ದುಲ್ಅಲಿಂ ಬಸರಿಕಟ್ಟಿ ಬಣ ಬಹುಮತ ಸಾಧಿಸಿದ್ದು 10 ಸ್ಥಾನಗಳನ್ನು ಪಡೆದಿದೆ. ಇನ್ನೂ ಸಂಸ್ಥೆಯ ಮಾಜಿ ಅಧ್ಯಕ್ಷ ಎಲ್.ಎಸ್.ದಲಾಲ ಬಣ 4 ಸ್ಥಾನಗಳನ್ನು ಹಾಗೂ ಓರ್ವ ಇಮ್ರಾನ್ ಶೇಖ್ ಸ್ವತಂತ್ರ್ಯ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
Leave a Comment