ಹಳಿಯಾಳ:- ಭಾರತೀಯಗಡಿ ಭದ್ರತಾ ಪಡೆಯಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡುಮ್ಮಿಂಗ್ ಸಿದ್ಧಿ ಅವರು ಊರಿಗೆ ಬರುತ್ತಿದ್ದಾಗ ಅಕಾಲಿಕರಾಗಿ ನಿಧನರಾದ ಸುದ್ದಿ ತುಂಬಾ ದುಃಖದ ಸಂಗತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಕಾರವಾರದ ಮಾಕೇರಿಗ್ರಾಮದವಾರದ ಡುಮ್ಮಿಂಗ್ ದೇಶ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡು, ದೂರದ ಊರುಗಳಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ಹುತಾತ್ಮರಾಗಿದ್ದು ಅವರ ಕೊಡುಗೆಯನ್ನು ಈ ರಾಷ್ಟ್ರವು ಸದಾ ನೆನಪಿನಲ್ಲಿಟ್ಟುಕೊಂಡಿರಲಿದೆ ಎಂದಿದ್ದಾರೆ.
ಮಗನನ್ನು ಕಳೆದುಕೊಂಡಿರುವ ಕುಟುಂಬಕ್ಕೆ ನೋವನ್ನು ಮೀರುವ ಶಕ್ತಿಯನ್ನು ಭಗವಂತ ನೀಡಲಿ ಹಾಗೂ ಅಗಲಿದ ಸೈನಿಕನ ಆತ್ಮಕ್ಕೆ ಪರಮಾತ್ಮನು ಶಾಂತಿಯನ್ನು ಕೊಡಲೆಂದು ಪ್ರಾರ್ಥಿಸಿದ್ದಾರೆ.
Leave a Comment