ಹೊನ್ನಾವರ .ತಾಲೂಕಿನ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕವಲಕ್ಕಿಯಲ್ಲಿ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಭಾರತೀ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ . ಉಮೇಶ ವಿ. ಹೆಗಡೆ ಅಬ್ಳಿ ಇವರು ವಹಿಸಿದ್ದರು.
ರವೀಂದ್ರ ಪಿ.ಸಿ. ವಲಯ ಅರಣ್ಯ ಅಧಿಕಾರಿಗಳು ಹೊನ್ನಾವರ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜನಾರ್ಧನ ವೈದ್ಯ ಕರ್ನಾಟಕ ಬ್ಯಾಂಕ್ ಬ್ರಾಂಚ್ ಮ್ಯಾನೇಜರ್ ಹೊನ್ನಾವರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವೇದಿಕೆಯ ಮೇಲೆ ಶ್ರೀ ಭಾರತೀ ಎಜ್ಯುಕೇಶನ್ ಟ್ರಸ್ಟಿನ ಕಾರ್ಯದರ್ಶಿಗಳಾದ . ಟಿ.ಜಿ.ಹೆಗಡೆ, ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಧ್ಯಾಪಕಿಯಾದ ಶ್ರೀ. ವೈಲೆಟ್ ಫರ್ನಾಂಡಿಸ್ರವರು ಉಪಸ್ಥಿತರಿದ್ದರು.
ಉದ್ಘಾಟಕರಾದ ರವೀಂದ್ರ ಪಿ.ಸಿ ವಲಯ ಅರಣ್ಯ ಅಧಿಕಾರಿಗಳು ಹೊನ್ನಾವರ ಮಾತನಾಡಿ ಇಂತಹಪರಿಸರದಲ್ಲಿ ಹುಟ್ಟಿದ್ದು ಇಲ್ಲಿಯ ಮಕ್ಕಳ ಪುಣ್ಯ, ನಮ್ಮ ದೇಶದಲ್ಲಿ ಕ್ರೀಡೆಗಳಿಗೆ ಉತ್ತೇಜನ ಕಡಿಮೆ ಶಾಲಾ ಮಟ್ಟದಲ್ಲಿಯೇ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕೆಂದು ಕರೆ ಕೊಟ್ಟರು.
ಈ ಸಂದರ್ಭದಲ್ಲಿ ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ನಿಸರ್ಗಾ ಗೌಡ, ಕುಮಾರ ಗುರುದೇವ ಕಿಣ , ಕುಮಾರ ವಿನಾಯಕ ನಾಯ್ಕ ಇವರ ಈ ವರ್ಷದ ಕ್ರೀಡಾ ಸಾಧನೆಗಾಗಿ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ಅಥಿತಿಗಳಾದ ಜನಾರ್ಧನ ವೈದ್ಯ ಕರ್ನಾಟಕ ಬ್ಯಾಂಕ್ ಬ್ರಾಂಚ್ ಮ್ಯಾನೇಜರ್ ಹೊನ್ನಾವರ ಮಾತನಾಡಿ ಕ್ರೀಡೆ ಎನ್ನುವುದು ಮಕ್ಕಳ ಮಾನಸಿಕ ಮತ್ತು ದೈಹಿಕ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು ಮತ್ತು ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತೆ ಕರೆ ಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಉಮೇಶ ಹೆಗಡೆ ಅಬ್ಳಿ ಇವರು ಮಾತನಾಡಿ ಶಾಲೆಯ ಏಳಿಗೆಗೆ ಶ್ರಮಿಸಿದ ಎಲ್ಲರನ್ನು ಅಭಿನಂದಿಸಿದರು ಮತ್ತು ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡುವಂತೆ ಕರೆ ಕೊಟ್ಟರು.
ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾಲ ಕ್ರೀಡಾ ಕೂಟವನ್ನು ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮವನ್ನು ಸಹಶಿಕ್ಷಕಿಯಾದ ರಮ್ಯಾ ಭಟ್ ನಿರೂಪಿಸಿದರು. . ರೇಷ್ಮಾ ಜೊಗಳೇಕರ್ ವಂದಿಸಿದರು.
Leave a Comment