ಹೊನ್ನಾವರ: ತಾಲೂಕಿನ ಗುಣವಂತೆಯ ಕೆರಮನೆ ಸಮೀಪ À ್ರ ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೊನ್ನಾವರ ದಿಂದ ಭಟ್ಕಳದ ಕಡೆಗೆ ಹೋಗುತಿದ್ದ ಬೈಕ್ಗೆ ಭಟ್ಕಳ ಮಾರ್ಗದಿಂದ ಹೊನ್ನಾವರದ ಮಾರ್ಗವಾಗಿ ಬರುತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಘಟನೆ ನಡೆದಿದೆ ಎನ್ನಲಾಗಿದೆ. ಅಪಘಾತ ಪಡಿಸಿದ ಲಾರಿಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಅಫಘಾತದಲ್ಲಿ ಮೃತರ ದೇಹ ಚಿದ್ರಚಿದ್ರವಾಗಿದೆ. ಕುಂದಾಪುರ ತಾಲೂಕಿನ ಸಿದ್ದಾಪುರ ಮೂಲದ ದಿನೇಶ್ ಮಡಿವಾಳ(26), ಹೊನ್ನಾವರ ತಾಲೂಕಿನ ಮಾವಿನಕುರ್ವ ಗ್ರಾಮದ ಪ್ರಸನ್ನ ಆಚಾರಿ(23) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಈ ಕುರಿತು ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮ್ರತರಿಬ್ಬರು ಸೌಕುರು ಯಕ್ಷಗಾನ ಮೇಳದ ಕಲಾವಿದರು: ಸೌಕೂರು ಮೇಳದ ಸ್ತ್ರೀ ಪಾತ್ರಧಾರಿ ದಿನೇಶ್ ಮಡಿವಾಳ ಹಾಗೂ ಪುಂಡು ವೇಷಧಾರಿ ಪ್ರಸನ್ನ ಆಚಾರ್ಯ ಎಂದು ತಿಳಿದು ಬಂದಿದೆ. ಬುಧವಾರ ಸೌಕೂರು ಮೇಳದ ಪ್ರದರ್ಶನ ಮುರ್ಡೇಶ್ವರದಲ್ಲಿತ್ತು ಎನ್ನಲಾಗಿದೆ. ಯಕ್ಷ ಕಲಾವಿದ ಪ್ರಸನ್ನರು ತಮ್ಮ ಊರಾದ ಹೊನ್ನಾವರಕ್ಕೆ ಬುಧವಾರ ಬೆಳಿಗ್ಗೆ ಬೈಕ್ ನಲ್ಲಿ ಸಹ ಕಲಾವಿದರಾದ ದಿನೇಶ್ ಮಡಿವಾಳರೊಂದಿಗೆ ತೆರಳಿದ್ದರು ಎನ್ನಲಾಗಿದ್ದು ರಾತ್ರಿಯ ಪ್ರದರ್ಶನಕ್ಕೆ ಬರುವಾಗ ಗುಣವಂತೆಯಲ್ಲಿ ಅಪಘಾತ ಸಂಭವಿಸಿದೆ. ಇಬ್ಬರೂ ಉತ್ತಮ ಕಲಾವಿದರಾಗಿದ್ದು , ತಮ್ಮ ಪಾತ್ರಗಳಿಂದ ಪ್ರೇಕ್ಷಕರ ಮನಸೂರೆಗೊಂಡಿದ್ದರು.
Leave a Comment