ಶಿಕ್ಷಣ ರಾಷ್ಟ್ರೀಕರಣ ಮಾಡುವ ತರಾತುರಿ ನಡೆಯುತ್ತಿದೆ ಮರಾಠಿ ನನ್ನ ಮಾತೃಭಾಷೆ ಆದರೆ ಕನ್ನಡ ನನ್ನ ಊಸಿರು ನಾನು ರಾಷ್ಟ್ರೀಕರಣ ನೀತಿಯನ್ನು ಬಲವಾಗಿ ವಿರೋಧಿಸುತ್ತೇನೆ ಎಂದು ಮಾಜಿ ಗೃಹ ಸಚೀವ ಪಿ.ಜಿ.ಆರ್ ಸಿಂಧ್ಯಾ ಅಭಿಪ್ರಾಯಪಟ್ಟರು.
ಅವರು ಹೊನ್ನಾವರದ ಎಂ,ಪಿ.ಐ ಸೊಸೈಟಿಯ ಸೆಂಟ್ರಲ್ ಸ್ಕೂಲನವರು ಹಮ್ಮಿಕೊಂಡ ಶಾಲಾ ದಶಮಾನೊತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಜೊತೆ ಗಿಡಕ್ಕೆ ನೀರುಣಿಸುವ ಮೂಲಕ ಪರಿಸರ ಪ್ರೀತಿ ತೋರುವ ಮೂಲಕ ಉದ್ಘಾಟಿಸಿದರು
ಒಂದು ಶಿಕ್ಷಣ ಸಂಸ್ಥೆ ಕಟ್ಟುವುದು ಸುಲಭದ ಮಾತಲ್ಲ. ಆದರೆ ದಶಕಗಳ ಹಿಂದೆ ಎಂ,ಪಿ.ಇ ಸೊಸೈಟಿಯನ್ನು ಹುಟ್ಟಿಹಾಕುವ ಮೂಲಕ ಶೈಕ್ಷಣಿಕ ಕುಂದುಕೊರತೆಯನ್ನು ಬಗೆಹರಿಸಿ ಜಿಲ್ಲೆಯಲ್ಲಿ ಉತ್ತಮವಾದ ಶ್ಯಕ್ಷಣಿಕ ಸಂಸ್ಥೆ ಮುನ್ನಡೆಸುತ್ತಿರುವುದು ನಿಜಕ್ಕೂ ಪ್ರಶಂನಾರ್ಹವಾದದು. ಗ್ರಾಮೀಣಪ್ರದೇಶದಲ್ಲಿ ಇಂದಿನ ದಿನದಲ್ಲಿ ಗುಣಮಟ್ಟದ ಶಿಕ್ಷಣದ ಅವಶ್ಯಕತೆ ಇತ್ತು ಆದರೆ ಹೊನ್ನಾವರದಂತಹ ಪ್ರದೇಶದಲ್ಲಿ ಆಂಗ್ಲಮಾಧ್ಯಮದ ಶಿಕ್ಷಣದ ಜೊತೆ ಕಲೆ, ಕ್ರೀಡೆ, ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುವಂತಹ ಮಟ್ಟಿಗೆ ವಿದ್ಯಾರ್ಥಿಗಳನ್ನು ಸಜ್ಜುಮಾಡುತ್ತಿರುವ ಶಿಕ್ಷಕರ ಶ್ರಮ ಮೆಚ್ಚಬೇಕು. ಇಂದು ಬಡತನ, ಬರಗಾಲ ಮತ್ತು ನಗರದಲ್ಲಿ ಸಿಗುವಂತಹ ಸೌಲಭ್ಯವಂಚಿತರಾದರೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೊರಹಾಕುತ್ತಿದ್ದಾರೆ. ಸರ್ಕಾರದ ಒಂದೊದು ತಿರ್ಮಾಣ ಫಲ ನೀಡುವುದಿಲ್ಲ ಕೇಂದ್ರದ ಮೇಕ್ ಇನ್ ಇಂಡಿಯಾ ಯೋಜನೆ ಇದ್ದರೂ ಚೈನಾ, ಯುರೋಪ್ ದೇಶಗಳಿಂದ ಅನೇಕ ವಸ್ತುಗಳು ನಮ್ಮದೇಶದಲ್ಲಿ ಹೇರಳವಾಗಿ ಸಿಗುತ್ತಿದೆ. ಕರಾವಳಿ ಭಾಗದ ಬ್ಯಾಂಕ್ ಇಂದು ತನ್ನ ಅಸ್ಥಿತ್ವ ಕಳೆದುಕೊಂಡು ರಾಷ್ಟ್ರೀಕರಣ ಗೊಳ್ಳುತ್ತಿದ್ದು ಅದರಿಂದ ಉದ್ಬವವಾಗುವ ಸಮಸ್ಯೆಗಳನ್ನು ನಾವು ಅನುಭವಿಸುತ್ತಿದ್ದೇವೆ. ಇಂದು ಇಂಗ್ಲೀಷ್ ಭಾಷೆಯ ಮೇಲೆ ವ್ಯಾಮೋಹದ ಮೇಲೆ ಹೋಗುವುದಲ್ಲ ಹಣ ಮಾಡುವ ಉದ್ದೇಶದಿಂದ ಹೋಗುವುದು ನಿಜಕ್ಕೂ ದುರಂತ. ಮನುಷ್ಯನ ಆಸೆಗಳಿಗೆ ಇತಿಮಿತಿ ನೀಡುವ ಶಿಕ್ಷಣವನ್ನು ನಾವು ಇಂದು ನೀಡಬೇಕಿಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಧನ ಸಹಾಯ ನೀಡಿದ ಅದ್ಯಕ್ಷರಾದ ಡಾ.ಎಂ.ಪಿ.ಕರ್ಕಿ, ಜಿ.ಜಿ.ಸಭಾಹಿತ, ಆರ್.ಆರ್.ಶಾಸ್ತ್ರಿ, ರಂಗರಾಯ ಕಾಮತ್ ಇವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಅತ್ಯಧಿಕ ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಸ್ಕೌಟ ಮತ್ತು ಗೈಡ್ಸ ರೈಜಂರ್ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾಥಿಗಳನ್ನು ಗೌರವಿಸಲಾಯಿತು.
ಇದೇ ಪ್ರಥಮ ಬಾರಿಗೆ ಜಾರಿಗೆ ತಂದ ಶರಾವತಿ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅನಿಸಿಕೆ ವ್ಯಕ್ತಪಡಿಸಿದ ಪಿ.ಬಿ.ಶ್ಯಾನಭಾಗ ಮಾತನಾಡಿ ಸಂಸ್ಥೆಯು ರಾಜ್ಯಮಟ್ಟದ ಸಾಧನೆ ಮಾಡುವಂತಹ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ತಾಲೂಕಿನ ಹಿರಿಮೆಯಾಗಿದೆ. ನಾನು ಮೂಲತಃ ಕೊಂಕಣಿ ಭಾಷಿಗನಾದರೂ ಕನ್ನಡದ ಮೇಲೆ ಅಪಾರ ಪ್ರೀತಿಯುಳ್ಳವನಾಗಿದ್ದೇನೆ. ನಾವು ಪ್ರೀತಿಯಿಂದ ಇಂಗ್ಲೀಷ್ ಕಲಿಯೋಣ. ವ್ಯವಹಾರಕ್ಕಾಗಿ ಮಾತ್ರ ಮಾರುಹೋಗದೇ ಎಲ್ಲಾಭಾಷೆಯನ್ನು ಪ್ರೀತಿಸುವ ಗುಣವನ್ನು ಅಳವಡಿಸಿಕೊಳ್ಳೊಣ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷರಾದ ಡಾ.ಎಂ.ಪಿ.ಕರ್ಕಿ ವಹಿಸಿದ್ದರು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗೀರೀಶ ಪದಕಿ, ಸಂಸ್ಥೆಯ ಉಪಾಧ್ಯಕ್ಷರಾದ ಕೃಷ್ಣಮೂರ್ತಿ ಭಟ್ ಶಿವಾನಿ, ಕಾರ್ಯದರ್ಶಿ ಎಸ್.ಎಂ.ಭಟ್, ಖಜಾಂಚಿ ಉಮೇಶ ನಾಯ್ಕ, ಪ್ರಿನ್ಸಿಪಾಲರಾದ ಕಾಂತಿ ಭಟ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಮನೊರಂಜನಾ ಕಾರ್ಯಕ್ರಮ ನೇರವೇರಿತು.
Leave a Comment