ಹಳಿಯಾಳ : ಜಿಲ್ಲೆಯ ಇತಿಹಾಸದಲ್ಲಿಯೇ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ ಎರಡು ಅವಧಿಗೆ ಆಯ್ಕೆಗೊಂಡು ಸೇವೆ ಸಲ್ಲಿಸುತ್ತಿರುವ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೆಕರ ಅವರಿಗೆ ಸರ್ಕಾರದ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಶನಿವಾರ ಪಟ್ಟಣದ ಇಂದಿರಾ ನಗರ ಅಭಿವೃದ್ದಿ ಸಂಘ ಮತ್ತು ಢೋಹರ ಕಕ್ಕಯ್ಯಾ ಸಮಾಜದಿಂದ ಮನವಿ ಸಲ್ಲಿಸಲಾಯಿತು.
ಪಟ್ಟಣದ ಶ್ರೀ ಬಸವೇಶ್ವರ ಸರ್ಕಲ್ದಲ್ಲಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಮೌನ ಮೆರವಣ ಗೆಯನ್ನು ನಡೆಸಿ ಶಿವಾಜಿ ವೃತ್ತದ ಮೂಲಕ ಸಾಗಿ ಮಿನಿವಿಧಾನಸೌಧಕ್ಕೆ ತಲುಪಿ ತಹಶೀಲದಾರ ಅವರಿಗೆ ರಾಜ್ಯದ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಇಗಾಗಲೇ ಕಳೆದ 30-40 ವರ್ಷಗಳಿಂದ ಸಕ್ರೀಯ ರಾಜಕೀಯದಲ್ಲಿ ತಮಗೆ ದೊರೆತ ಅಧಿಕಾರದ ಪರಿಮಿತಿಯಲ್ಲಿ ಮುಸ್ಲಿಂ, ಮರಾಠಾ, ಎಸ್ಸಿ-ಎಸ್ಟಿ, ಕ್ರಿಶ್ಚಿಯನ್ರು ಸೇರಿದಂತೆ ಸಮಾಜದ ಎಲ್ಲಾ ಸಮುದಾಯಗಳ ಉನ್ನತಿಗಾಗಿ ತಮ್ಮದೇಯಾದ ಕೂಡುಗೆಯನ್ನು ನೀಡಿರುವ ಘೋಟ್ನೆಕರ ಅವರಿಗೆ ಸರ್ಕಾರದ ಯಾವುದೇ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸುವಂತೆ ಮನವಿ ಮಾಡಿದ್ದಾರೆ.
ಕೆಡಿಸಿಸಿ ಬ್ಯಾಂಕಿನ ಚೇರಮನ್ರಾಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡುವುದರ ಮೂಲಕ ಆ ಬ್ಯಾಂಕಿನಲ್ಲಿ ರೈತರು, ಬಡವರು ಸೇರಿದಂತೆ ಪ್ರಮುಖವಾಗಿ ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಅನುಕೂಲತೆಯನ್ನು ಮಾಡಿಕೊಟ್ಟ ಎಸ್.ಎಲ್.ಘೋಟ್ನೆಕರ ಅವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನಮಾನ ನೀಡುವುದರ ಮೂಲಕ ನಮ್ಮ ಸಮಾಜಕ್ಕೆ ಗೌರವ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸುವರ್ಣ ಮಾದರ, ಹನುಮಂತ ಮಂಡಳ, ಎಸಯ್ಯಾ ತುಮಗುಂಟ, ಜಕ್ರಯ್ಯಾ ಮಾದರ, ಸುಂದರ ಮಾದರ, ಡೇವಿಡ್, ಸರಸ್ವತಿ ಮಾದರ, ಮಂಜುನಾಥ ಗಜಾಕೋಶ,ಎಲ್.ಡಿ.ಗಜಾಕೋಶ, ಪ್ರಭಾಕರ ಗಜಾಕೋಶ, ವಿನೋಧ ಗಜಾಕೋಶ, ಗಂಗಾಧರ ಖರಾಟೆ ಮತ್ತೀತರರು ಹಾಜರಿದ್ದರು.
Leave a Comment