ಹಳಿಯಾಳ:- ಶತಾಯುಷಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರಿಗೆ ಹಳಿಯಾಳದಲ್ಲಿ ವಿವಿಧ ಸಂಘ -ಸಂಸ್ಥೆಗಳಿಂದ ಹಾಗೂ ಮುಸ್ಲಿಂ ಸಮಾಜ ಬಾಂಧವರಿಂದ ಕೂಡ ಭಕ್ತಿಪೂರ್ವಕ ಶೃದ್ದಾಂಜಲಿ ಸಲ್ಲಿಸಲಾಗಿರುವುದು ಸ್ವಾಮಿಜಿಗಳು ಸಮಾನತೆಯ ಹರಿಕಾರರಾಗಿದ್ದರು ಎನ್ನುವುದಕ್ಕೆ ಇಂಬು ನೀಡಿದಂತಾಗಿದೆ.
ಪಟ್ಟಣದ ಜವಾಹರ್ ರಸ್ತೆಯಲ್ಲಿ ಪಟ್ಟಣದ ಮುಸ್ಲಿಂ ಸಮಾಜದ ಮೌಲಾನಾ(ಧರ್ಮಗುರು) ನಸ್ರುಲ್ಲಾ, ಹಾಜಿ ಲಿಯಾಖತ ಅಲಿ ದಲಾಲ, ಪ್ರಮುಖರಾದ ರಾಜು ಮುಲ್ಲಾ, ಸೈಯದಲಿ ಅಂಕೋಲೆಕರ, ಸುಬಾನಿ ಹುಬ್ಬಳ್ಳಿ ಮೊದಲಾದವರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಒಂದು ನಿಮಿಷದ ಮೌನಾಚರಣೆ ಸಲ್ಲಿಸಿ ಶೃದ್ದಾಂಜಲಿ ಸಲ್ಲಿಸಿದರು.
ಸೋಮವಾರ ರಾತ್ರಿ ಪಟ್ಟಣದ ಶಿವಾಜಿ ವೃತ್ತದದಲ್ಲಿ ಮಿನಿ ವಿಧಾನಸೌಧದ ಎದುರು ವಿವಿಧ ಸಂಘಟನೆಯವರು ಜಂಟಿಯಾಗಿ ಶಿವಕುಮಾರ ಸ್ವಾಮಿಜಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೆಣದ ಬತ್ತಿಗಳನ್ನು ಬೆಳಗಿ ಮೌನಾಚರಣೆ ಸಲ್ಲಿಸಿ ಶ್ರೀಗಳಿಗೆ ಭಾವಪೂರ್ಣ ಶೃದ್ದಾಂಜಲಿ ಸಲ್ಲಿಸಿದರು.
ಜವಾಹರ ರಸ್ತೆಯಲ್ಲಿ ಕೂಡ ವ್ಯಾಪಾರಸ್ಥರು, ಸಾರ್ವಜನೀಕರು, ಪಟ್ಟಣದ ವೀರಕ್ತ ಮಠದಲ್ಲಿ ಕೂಡ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಸಮಾಜ ಬಾಂಧವರಿಂದ ಶೃದ್ದಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಬೆಂಡಿಗೆರಿಮಠ, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ವಿಲಾಸ ಕಣಗಲಿ, ಪದಾಧಿಕಾರಿಗಳು, ಕಾರ್ಯಕರ್ತರು, ಲಾಯನ್ಸ್ ಕ್ಲಬ್ನ ಅಧ್ಯಕ್ಷ ಹಿರೇಮಠ, ಜೀಜಾಮಾತಾ ಮಹಿಳಾ ಸಂಘಟನೆಯ ಭಾರತಿ ಬಿರ್ಜೆ, ಶಾಂತಾ ಹಿರೇಕರ, ಪತ್ರಕರ್ತರು, ಪಿಎಸ್ಐ ಆನಂದಮೂರ್ತಿ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Leave a Comment