ಹಳಿಯಾಳ:- ರಾಜ್ಯದ ಜನರಿಗೆ ಚಾಕೊಲೆಟ್ ನೀಡುವ ಬಜೆಟ್ ಮಂಡನೆಯನ್ನು ಗಮನಿಸಿದರೇ ರಾಜ್ಯ ಕಾಂಗ್ರೇಸ್ –ಜೆಡಿಎಸ್ ಸಮ್ಮೀಶ್ರ ಸರ್ಕಾರ ತನ್ನ ಅಧಿಕಾರದ ಸಂಪೂರ್ಣ ಅವಧಿ ಮುಗಿಸುವುದಿಲ್ಲ ಎನ್ನುವುದನ್ನು ತೊರ್ಪಡಿಸುತ್ತದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಪ್ರತಿಕ್ರಿಯಿಸಿದ್ದಾರೆ.
ಮೂಗಿಗೆ ತುಪ್ಪ ಸವರುವ ಬಜೆಟ್ :-
ಬಜೆಟ್ ಮಂಡನೆ ನಂತರ ಪತ್ರರ್ಕರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ 6.5ಕೋಟಿ ಜನಸಂಖ್ಯೆಯಿದ್ದು 10 ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇನೆಂದು ಹೇಳುವ ಕುಮಾರಸ್ವಾಮಿಯವರು ವಿವೇಚನೆಯನ್ನು ಕಳೆದುಕೊಂಡಿದ್ದಾರೆಯೇ ? ಕುಮಾರಸ್ವಾಮಿಯವರ ಚುನಾವಣಾ ತಯಾರಿಯ ಬಜೆಟ್ ಇದು ಕ್ಷಷಿ ಕ್ಷೇತ್ರ ಸಮಗ್ರವಾಗಿ ಅಭಿವೃದ್ದಿ ಮಾಡುವ ಬಜೆಟ್ ಆಗಿರದೇ ರೈತರ ಮೂಗಿಗೆ ತುಪ್ಪ ಸವರುವ ಕಾರ್ಯವಾಗಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ವಿವೇಚನಾ ರಹಿತವಾದ ಬಜೆಟ್ ಆಗಿದ್ದು ಕನ್ನಡಿಯೋಳಗಿನ ಗಂಟಾಗಿದೆ ಎಂದಿರುವ ಹೆಗಡೆ ರೈತರ ಅಭಿವೃದ್ದಿಗಾಗಿ ಪ್ರತಿ ಹೆಕ್ಟರ್ಗೆ ಪ್ರೋತ್ಸಾಹಧನವನ್ನು 7500ರೂ. ಘೊಷಿಸಿರುವುದು ಈಗಾಗಲೇ ಮೋದಿ ಸರ್ಕಾರ 6000ಸಾವಿರ ರೂ. ನೀಡುತ್ತಿದ್ದು ರಾಜ್ಯ ಸರ್ಕಾರ ಕೇವಲ 1500 ರೂ.ನೀಡುವುದಾಗಿ ಹೇಳಿರುವುದು ರೈತರ ಮೇಲಿನ ಕಾಳಜಿಯನ್ನು ತೊರಿಸುತ್ತದೆ ಎಂದಿದ್ದಾರೆ.
ಜಿಲ್ಲೆಯ ಹಿಂದೂಳಿದವರು ನೀರ್ಲಕ್ಷ್ಯ :-
ಉತ್ತರ ಕನ್ನಡ ಜಿಲ್ಲೆಗೆ ಪ್ರೋತ್ಸಾಹದಾಯಕ ಹಾಗೂ ಆಶಾದಾಯಕವಾಗಿರದ ಬಜೆಟ್ ಜಿಲ್ಲೆಯ ಅತಿಕ್ರಮಣದಾರರ ಸಮಸ್ಯೆಗೆ ಪರಿಹಾರವಿಲ್ಲ, ಜಿಲ್ಲೆಯ ಅತಿ ಹಿಂದೂಳಿದ ಗೌಳಿಗರು, ಕುಣಬಿಗಳು, ಹಾಲಕ್ಕಿ ಗೌಡ ಸಮುದಾಯಗಳಿಗೆ ಯಾವುದೇ ಕಾರ್ಯಕ್ರಮ ಘೋಷಿಸದೆ ಸಂಪೂರ್ಣವಾಗಿ ನೀರ್ಲಕ್ಷಿಸಲಾಗಿದೆ ಎಂದು ಕಿಡಿ ಕಾರಿದ್ದಾರೆ.
ಹಲವು ಭಾಗ್ಯಗಳು ಬಂದ್-ಜಾರಿಗೆ ಬರದ ಬಜೆಟ್:-
ಹಿಂದೂಳಿದ ವರ್ಗಗಳ ಯುವಕರಿಗೆ ಸ್ವಂತ ಕಾಲ ಮೇಲೆ ನಿಲ್ಲಲು ಯಾವ ಯೋಜನೆಯನ್ನು ಘೋಷಿಸದೆ ಇರುವ ಚುನಾವಣಾ ಪೂರ್ವ ತಯಾರಿ ಬಜೆಟ್ ಇದಾಗಿದ್ದು ಈಗಾಗಲೇ ಸಿದ್ದರಾಮಯ್ಯ ಸರ್ಕಾರದ ಹಲವು ಭಾಗ್ಯಗಳನ್ನು ಬಂದ್ ಮಾಡಲಾಗಿದ್ದು ಖಜಾನೆ ಖಾಲಿ ಇರುವ ರಾಜ್ಯ ಸರ್ಕಾರ ವಿವೇಚನೆ ಇಲ್ಲದೇ ಕೇವಲ ರಾಜಕೀಯ ಲಾಭಕ್ಕಾಗಿ ಘೋಷಿಸಿರುವ ಯಾವ ಯೋಜನೆಗಳು, ಘೊಷಣೆಗಳು ಜಾರಿಗೆ ಬರದ ಬಜೆಟ್ ಮಂಡನೆಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
Leave a Comment