ಹಳಿಯಾಳ: ಮಡಿವಾಳ ಮಾಚಿದೇವರು 12ನೇ ಶತಮಾನದ ಪ್ರಸಿದ್ಧ ಶರಣರು ಅವರು ತನ್ನ ಕಾಯಕವನ್ನು ದೇವರ ಕೆಲಸ ಎಂದು ಭಾವಿಸಿದ್ದರು ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅಭಿಪ್ರಾಯಪಟ್ಟರು.
ತಾಲೂಕಾ ಆಡಳಿತ, ತಾಲೂಕ ಪಂಚಾಯತ, ಪುರಸಭೆ, ಶಿಕ್ಷಣ ಇಲಾಖೆ ಹಳಿಯಾಳ ಹಾಗೂ ತಾಲೂಕ ಮಡಿವಾಳ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಸಭಾಭವನ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮವನ್ನು ಉಧ್ಘಾಟಿಸಿ ಅವರು ಮಾತನಾಡಿದರು. ಗಾನಯೋಗಿ ಪುಟ್ಟರಾಜ ಗವಾಯಿ ಮತ್ತು ನಡೆದಾಡುವ ದೇವರೆಂದೇ ಪ್ರಸಿದ್ಧರಾಗಿದ್ದ ಸಿದ್ಧಗಂಗೆಯ ಡಾ.ಶಿವಕುಮಾರ ಸ್ವಾಮೀಜಿಯವರ ಸಾಧನೆಗಳನ್ನು ಘೊಟ್ನೇಕರ ಹೊಗಳಿದರು.
ಬರಹಗಾರ ಮಹಾಂತ ಎಮ್. ದೇಸಾಯಿಸ್ವಾಮಿ ಮಡಿವಾಳ ಮಾಚಿದೇವರ ಜೀವನ ಚರಿತ್ರೆ ಬಗ್ಗೆ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾದ ಎಮ್.ಎನ್. ತಳವಾರ ಮಾಚಿದೇವರ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತ ಉಪಾಧ್ಯಕ್ಷೆ ನೀಲವ್ವಾ ಮಡಿವಾಳ, ಪುರಸಭೆ ಸದಸ್ಯರಾದ ದ್ರೌಪದಿ ಅಗಸರ, ಲಕ್ಷ್ಮೀ ವಡ್ಡರ್, ಗ್ರೇಡ್-2 ತಹಶೀಲ್ದಾರ ಜಿ.ಕೆ. ರತ್ನಾಕರ, ಸಿಪಿಐ ಬಿ.ಎಸ್. ಲೋಕಾಪುರ, ಮಡಿವಾಳ ಸಮಾಜದ ಆನಂದ ಮಡಿವಾಳ, ರಮೇಶ ಮಡಿವಾಳ ವಿವಿಧ ಸಂಘಗಳ ಪದಾಧಿಕಾರಿಗಳು, ತಾಲೂಕಾ ಮಡಿವಾಳ ಸಮಾಜದದವರು ಇದ್ದರು. ಶಿಕ್ಷಕ ಪಿ.ಡಿ.ಮಡಿವಾಳ ಹಾಗೂ ರಮೇಶ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.
Leave a Comment