ಹಳಿಯಾಳ:- 30 ವರ್ಷಗಳ ನಂತರ ತಾಲೂಕಿನ ಹುನ್ಸವಾಡ ಗ್ರಾಮದಲ್ಲಿ ಗ್ರಾಮದೇವಿ ಲಕ್ಷೀದೇವಿ(ದ್ಯಾಮವ್ವಾ) ದೇವಿಯ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿದೆ. ಜಾತ್ರೆಯ ಪ್ರಮುಖ ಘಟ್ಟ ದೇವಿಯ ಹೊನ್ನಾಟ ದಿ. 27 ಹಾಗೂ 28 ಎರಡು ದಿನಗಳ ಕಾಲ ಸಾವಿರಾರು ಭಕ್ತರ ಭಕ್ತಿಘೋಷಗಳ ನಡುವೆ ವಿಜೃಂಭಣೆಯಿಂದ ಜರುಗಿತು.
ತುಳಜಾಪುರ ಮಠದ ಶ್ರೀ ಮಂಥಯೋಗಿ ಸಾಗರನಾಥಜೀ ಮಹಾರಾಜ ಅವರು ದೇವಿಯ ಹೊನ್ನಾಟಕ್ಕೆ ಚಾಲನೆ ನೀಡಿದರು.
ಸಾವಿರಾರು ಭಕ್ತರು ಭಂಡಾರವನ್ನು ಎರಚುತ್ತಾ ಉಧೋ ಉಧೋ- ಹರ ಹರ ಮಹಾದೇವ ಘೋಷಣೆಗಳೊಂದಿಗೆ ಗುರುವಾರ ದೇವಿಯ ಹೊನ್ನಾಟ ಮುಕ್ತಾಯಗೊಂಡಿದೆ.
ಪ್ರತಿದಿನ ಸಾರ್ವಜನೀಕರಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮಗಳು ನಡೆಯುತ್ತಿವೆ. ಪ್ರತಿದಿನ ವಿಶೇಷ-ಪೂಜೆ ಪುನಸ್ಕಾರ, ಸಾಂಸ್ಕøತೀಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿರುವ ಜಾತ್ರಾ ಕಮೀಟಿಯವರು ರವಿವಾರ ದಿ.3ರಂದು ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ. ಮಾರ್ಚ ದಿ.6 ರಂದು ಹುನ್ಸವಾಡ ಜಾತ್ರೆಗೆ ತೆರೆ ಬಿಳಲಿದೆ.
Leave a Comment