ಹೊನ್ನಾವರ : ರಾಷ್ಟ್ರೀಯತೆ ಮತ್ತು ಧರ್ಮಾಭಿಮಾನ ತಮ್ಮ ಪಕ್ಷದ ಸ್ವತ್ತಿನಂತೆ ಬಿ.ಜೆ.ಪಿ ವರ್ತಿಸುತ್ತಿದ್ದು ಸಮಾಜದಲ್ಲಿ ಭಾವನೆಗಳನ್ನು ಕೆರಳಿಸಿ ಮತವಾಗಿ ಪರಿವರ್ತಿಸಲು ದೊಡ್ಡ ಮಟ್ಟದ ಹುನ್ನಾರ ನಡೆಯುತ್ತಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಆರೋಪಿಸಿದರು.
ಅವರು ಕುಮಟಾದ ವೈಭವ ಹೊಟೇಲ್ ಸಭಾಭವನದಲ್ಲಿ ನಡೆದ ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧ್ಯಕ್ಷರು ಮತ್ತು ಏಜಂಟರುಗಳ ತರಬೇತಿ ಮತ್ತು ಸಿದ್ಧತಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೇಸ್ ಕೊಟ್ಟ ಕೊಡುಗೆ ಮತ್ತು ಕಾಂಗ್ರೇಸ್ ನಾಯಕರು ಹೋರಾಡಿದ ರೀತಿಯನ್ನು ಕಾರ್ಯಕರ್ತರಿಗೆ ಎಳೆಎಳೆಯಾಗಿ ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಶಂಭು ಶೆಟ್ಟಿ ಶಿಬಿರಾರ್ಥಿಗಳಿಗೆ ನಾಯಕನಾದವನ ಪ್ರಮುಖ ಕೌಶಲ್ಯಗಳ ಕುರಿತು ತರಬೇತಿ ನೀಡಿದರು. ಆಲೋಚನೆ, ಭಾವನೆ, ದೃಡಿಕರಿಸುವುದು, ಸಂವಹನ, ಪ್ರಭಾವ ಬೀರುವುದು, ತೀರ್ಮಾನ ಮಾಡುವುದು, ಸಮಸ್ಯೆ ಬಗೆಹರಿಸುವುದು ಮತ್ತು ಸಮಾಲೋಚಿಸುವುದು. ಈ ಪ್ರಮುಖ ವಿಷಯಗಳ ಕುರಿತು ಸವಿಸ್ತಾರವಾದ ಉಪನ್ಯಾಸ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಯಲ್ಲಾಪುರದ ದತ್ತಾತ್ರೇಯ ಗಾಂವಕರ ಮಾತನಾಡಿ ಮತಗಟ್ಟೆ ಕಾರ್ಯಕರ್ತರು ಒಬ್ಬರೇ ಯಾವುದೇ ನೀರ್ಣಯ ಕೈಗೊಳ್ಳದೇ ಸಮಿತಿಯ ಸದಸ್ಯರೆಲ್ಲಾ ಸೇರಿ ಯಾವ ರೀತಿಯ ನೀರ್ಣಯ ಕೈಗೊಳ್ಳಬೇಕೆಂಬ ಕುರಿತು ಬೂತ್ ಅಧ್ಯಕ್ಷರಿಗೆ ತರಬೇತಿ ನೀಡಿದರು.
ಕೆ.ಪಿ.ಸಿ.ಸಿ ಕಾರ್ಯದರ್ಶಿ ಅಬ್ಬಾಸ್ ತೋನ್ಸೆ ಮಾತನಾಡಿ ಕಾಂಗ್ರೇಸ್ ಪಕ್ಷದಲ್ಲಿ ನಾವೆಲ್ಲಾ ಯಾಕಾಗಿ ಕೆಲಸ ಮಾಡಬೇಕು ಅನ್ನುವುದರ ಕುರಿತು ವಿವರಿಸುತ್ತಾ ದೇಶದ ಸ್ವಾತಂತ್ರ್ಯ ಸಂಗ್ರಾನದಿಂದ ಇಂದಿನವರೆಗೂ ಎಲ್ಲಾ ಜಾತಿ, ಧರ್ಮದವರನ್ನು ಒಂದಾಗಿ ಕರೆದುಕೊಂಡು ಹೋಗುವ ಶಕ್ತಿ ಇದ್ದರೆ ಅದು ಕಾಂಗ್ರೇಸ್ಗೆ ಮಾತ್ರ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ವೀಶೇಷ ತರಬೇತಿಯೊಂದಿಗೆ ಆಗಮಿಸಿದ ಜಿಲ್ಲಾ ಪಂಚಾಯತ ಸದಸ್ಯ ರತ್ನಾಕರ ನಾಯ್ಕ, ಶಿರಶಿಯ ಜ್ಯೋತಿ ಪಾಟಿಲ್ ಮುಂಬರುವ ಚುನಾವಣೆಗೆ ಯಾವ ರೀತಿ ಸಿದ್ಧರಾಗಿರಬೇಕೆಂದು ವಿವರಿಸಿದರು.
ಕಾಂಗ್ರೇಸ್ ಪಕ್ಷದಲ್ಲಿ ನಡೆದ ಈ ವಿನೂತನ ಕಾರ್ಯಕ್ರಮ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಸಿದ್ಧತಾ ಶಿಬಿರದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ತಾರಾ ಗೌಡ , ಜಿಲ್ಲಾ ಸೇವಾದಳದ ಅಧ್ಯಕ್ಷ ಆರ್.ಎಚ್.ನಾಯ್ಕ, ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿಯಾದ ಹೊನ್ನÀಪ್ಪ ನಾಯ್ಕ, ನಾಗೇಶ ನಾಯ್ಕ, ತಾಲೂಕಾ ಮಹಿಳಾ ಅಧ್ಯಕ್ಷೆ ಸುರೇಖಾ ವಾರೇಕರ, ಯುವ ಕಾಂಗ್ರೇಸ್ ಮುಖಂಡ ರವಿಕುಮಾರ ಶೆಟ್ಟಿ ಉಪಸ್ಥಿತರಿದ್ದರು.
ಹೊನ್ನಾವರ ಬ್ಲಾಕ್ ಕಾಂಗ್ರೇಸಿನ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಟಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿ.ಎಲ್ ನಾಯ್ಕ ವಂದಿಸಿದರು.
Leave a Comment