ಹೊನ್ನಾವರ ಪಟ್ಟಣದ ಸೆಂಟ್ ಅಂತೋನಿ ಕ್ರೀಡಾಂಗಣದಲ್ಲಿ ಲಯನ್ಸ್ ಕ್ಲಬ್ ನಾಲ್ಕು ದಿನಗಳ ಕಾಲ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಆಹ್ವಾನಿತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯು ಕ್ರೀಡಾಭಿಮಾನಿಗಳ ರಸದೊತನ ನೀಡಿತು. ಪುರುಷರ ವಿಭಾಗದಲ್ಲಿ ಬಳ್ಳಾರಿಯ ಜಿಂದಾಲ್ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಮೂಡಬಿದರೆಯ ಆಳ್ವಾಸ್ ತಂಡ ಪ್ರಶಸ್ತಿಯನ್ನು ಪಡೆದುಕೊಂಡವು. ಪಂದ್ಯಾವಳಿಯಲ್ಲಿ ರಾಜ್ಯ ವಿವಿಧ ಭಾಗಗಳಿಂದ ಪುರುಷರ 5 ಮತ್ತು ಮಹಿಳೆಯರ 4 ತಂಡಗಳು ಸೇರಿದಂತೆ ಪ್ರತಿಷ್ಠಿತ 9 ತಂಡಗಳು ಭಾಗವಹಿಸಿದ್ದವು.
ಫೈನಲ್ ಮಹಿಳೆಯರ ವಿಭಾಗದಲ್ಲಿ ಮೈಸುರು ಹಾಸ್ಟೆಲ್ ಹಾಗೂ ಆಳ್ವಾಸ ನಡುವೆ ಫೈಪೋಟಿ ನಡೆದು ಕೊನೆಗೆ ಮೂಡಬಿದ್ರೆಯ ಆಳ್ವಾಸ ತಂಡ ಜಯಭೇರಿ ಬಾರಿಸಿತು. ಕೊನೇಯ ಪಂದ್ಯದಲ್ಲಿ ಪುರುಷರ ವಿಭಾಗದಲ್ಲಿ ಬಳ್ಳಾರಿಯ ಜಿಂದಾಲ್ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಆರ್ಮಿ ಮತ್ತು ರೈಲ್ವೆಸ್ ತಂಡಗಳ ನಡುವೆ ರೋಚಕ ಪಂದ್ಯ ಏರ್ಪಟ್ಟು ರೈಲ್ವೆಸ್ ತಂಡ ರನ್ನರ್ ಅಪ್ ಪ್ರಶಸ್ತಿ ಮುತ್ತಿಕ್ಕಿತು. ವಿಜೇತ ತಂಡಗಳಿಗೆ ಉತ್ತಮ ಆಟಗಾರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಹೊನ್ನಾವರದಲ್ಲಿ ಉತ್ತಮವಾದ ವಾಲಿಬಾಲ್ ಅಂಕಣವನ್ನ ನಿರ್ಮಾಣ ಮಾಡಿ ಕ್ರೀಡಾ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮಾಡಲಾಗಿದೆ. ಕ್ರೀಡಾಪಟುಗಳು ಕ್ರೀಡಾಮನೋಭಾವದಿಂದ ಆಡಿ ಕೀರ್ತಿ ತಂದಿದ್ದಾರೆ ಎಂದರು.
ಸಾಹಿತಿ ಜಯಶ್ರೀ ರಾಜು ಮಾತನಾಡಿ, ತಾಲೂಕಿನ ಕ್ರೀಡಾಪಟುಗಳಿಗೆ ರಾಜ್ಯಮಟ್ಟದ ತಂಡ ಆಹ್ವಾನಿಸಿ ಕ್ರೀಡಾ ಅಭಿಮಾನ ಮೂಡಿಸುವಲ್ಲಿ ಲಯನ್ಸಕ್ಲಬ್ ಮುಂದಾಗಿದೆ. ಕ್ರೀಡಾಪಟುಗಳಲ್ಲಿ ಸ್ಪರ್ಧಾತ್ಮಕತೆ, ಮಾನವೀಯತೆ ಇರುತ್ತದೆ. ಇದರಿಂದ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನಿರ್ಮಾಣವಾಗಲು ಸಹಕಾರಿಯಾಗುತ್ತದೆ ಎಂದರು.
ಹಿರಿಯ ವಾಲಿಬಾಲ್ ಆಟಗಾರ ಎನ್.ಜಿ.ಹೆಗಡೆ, ರಾಘವೇಂದ್ರ ಮೇಸ್ತ, ಡಾ. ಆಶಿಕ್ ಹೆಗ್ಡೆ, ಉದ್ಯಮಿ ಉಮೇಶ ಲಕಡಿ, ವೆಂಕಟೇಶ ಸಾಲೆಹಿತ್ತಲ್, ಲಯನ್ಸ ಅಧ್ಯಕ್ಷ ರಾಜೇಶ ಸಾಲೆಹಿತ್ತಲ್, ಪ್ರಮೋದ ಪಾಯ್ದೆ, ಸುರೇಶ ಎಸ್, ಯೋಗೀಶ ರಾಯ್ಕರ್ ಮತ್ತಿತರರು ಉಪಸ್ಥಿತರಿದ್ದರು.
Leave a Comment