ಹಳಿಯಾಳ:- ಭಾರತ ಸಂಸ್ಕøತಿ ಪ್ರತಿಷ್ಠಾನ ವತಿಯಿಂದ ಏರ್ಪಡಿಸಿದ್ದ 2018 ನೇ ಸಾಲಿನ ರಾಜ್ಯ ಮಟ್ಟದ ರಾಮಾಯಣ ಮತ್ತು ಮಹಾಭಾರತ ಪರೀಕ್ಷೆಯಲ್ಲಿ ಉತ್ತರಕನ್ನಡ ಜಿಲ್ಲೆಯ 10 ತಾಲ್ಲೂಕುಗಳ 86 ಶಾಲೆಗಳಿಂದ 4,925 ವಿದ್ಯಾಥಿಗಳು ಪಾಲ್ಗೊಂಡಿದ್ದು, ಪರೀಕ್ಷೆ ಬರೆದವರಲ್ಲಿ 94.14 % ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆಂದು ಭಾರತ ಸಂಸ್ಕøತಿ ಪ್ರತಿಷ್ಠಾನದ ಅಪ್ಪಾರಾವ ಪೂಜಾರಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು ರಾಜ್ಯಮಟ್ಟದ ಪರೀಕ್ಷೆಯಲ್ಲಿ ಒಟ್ಟೂ 846 ಶಾಲೆಗಳಿಂದ 61,350 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರೆಂದು ತಿಳಿಸಿರುವ ಅವರು ಪರೀಕ್ಷೆಗೆ ಹಾಜರಾಗಿದ್ದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರವನ್ನು ವಿತರಿಸಲಾಗಿದೆ. ಈ ವರ್ಷದ ವಿಶೇಷ ಜಿಲ್ಲಾ ಪ್ರಥಮ ಸ್ಥಾನಗಳಿಗೆ ಮತ್ತು ಜಿಲ್ಲಾ ದ್ವಿತೀಯ ಸ್ಥಾನಗಳಿಗೆ ಬೆಳ್ಳಿಯ ಪದಕಗಳನ್ನು ಹಾಗೂ ತಾಲೂಕು ಪ್ರಥಮ ಸ್ಥಾನಗಳಿಗೆ ಪುಸ್ತಕ ರೂಪದ ಬಹುಮಾನಗಳನ್ನು ಆಯಾ ಶಾಲಾ ಮಟ್ಟದಲ್ಲಿ ವಿತರಿಸಲಾಗಿದೆ ಎಂದು ಕೂಡ ಪೂಜಾರಿ ಹೇಳಿದ್ದಾರೆ.
ವಿಜೇತರು:- ಉತ್ತರಕನ್ನಡ ಜಿಲ್ಲೆಯಿಂದ ರಾಜ್ಯಮಟ್ಟದ ದ್ವಿತೀಯ ಸ್ಥಾನಕ್ಕೆ ರ್ಯಾಂಕ್ ವಿಜೇತರು –
ಕುಮಟಾದ ವಾಸುದೇವ ಸುರೇಶ ಗೌಡಾ, ನಿವೇದಿತಾ ದತ್ತಾ ಗೌಡಾ, ಸಿದ್ದಾಪುರದ ಸಾತ್ವಿಕ್ ಎಸ್ ಹೆಗಡೆ ಹಾಗೂ ಶಿರಸಿಯ ಚ್ಯವನ ಶರ್ಮಾ.
ತೃತೀಯ ಸ್ಥಾನ:- ಶಿರಸಿಯ ಚಿತ್ರಾ ಗಣಪತಿ ಹೆಗಡೆ, ಆಕಾಂಕ್ಷಾ ಆರ್. ಶೆಟ್ಟಿ, ಅಂಕಿತಾ ಚಂದ್ರಶೇಖರ ನಾಯ್ಕ, ಯಲ್ಲಾಪುರ ಸನ್ನಿಧಿ ಪಿ. ಭಟ್, ಸಿದ್ದಾಪುರದ- ಹೇಮಾ ಹೆಗಡೆ.
ಜಿಲ್ಲಾ ಮಟ್ಟದ ಪ್ರಥಮ ಸ್ಥಾನ:- ಹೊನ್ನಾವರದ -ಸ್ಮಿತಾ ಲಕ್ಷ್ಮಣ ನಾಯ್ಕ, ರಕ್ಷಿತಾ ಹನುಮಂತ ಗೌಡಾ, ಶ್ರೀನಿಧಿ ಎಂ. ಗೌಡಾ, ಸಂಜನಾ ನಾರಾಯಣ ನಾಯ್ಕ, ಶಿರಸಿಯ- ನಂದಿನಿ ನಾರಾಯಣ ಪುಜಾರಿ, ಪನ್ನಗ ಆರ್. ಹೆಗಡೆ, ಧನ್ಯಶ್ರೀ ಎಸ್ ಮಡಿವಾಳ, ರಾಧಿಕಾ ಎಮ್ ನಾಯ್ಕ ಹಾಗೂ ಯಲ್ಲಾಪುರದ ಪ್ರಗತಿ ಹೆಗಡೆ.
ಜಿಲ್ಲಾ ಮಟ್ಟದ ದ್ವಿತೀಯ ಸ್ಥಾನ:- ಮಯೂರಿ ಮೋಹನ ಭಟ್-ಶಿರಶಿ, ಹೊನ್ನಾವರದ ವರ್ಷಾ ವಿ. ಭಟ್, ಯೋಗೇಶ ಮರಾಠಿ, ಲಾವಣ್ಯಾ ದೇವೆಂದ್ರ ಪೂಜಾರಿ, ಭಟ್ಕಳದ ಪ್ರಿಯಾಂಕಾ ರಾಘವೇಂದ್ರ ಹೆಬ್ಬಾರ, ವರ್ಷಾ ದತ್ತಾತ್ರೇಯ ಭಟ್ ವಾನಳ್ಳಿ -ಶಿರಶಿ, ಶ್ರೀಧರ ಎನ್ ಭಟ್- ಯಲ್ಲಾಪೂರ, ನವ್ಯಾ ಗೌಡಾ ಜಡ್ಡಿಗಡ್ಡೆ ಶಿರಶಿ, ರಕ್ಷಿತಾ ಪಟಗಾರ ಚಿತ್ತರಗಿ- ಕುಮಟಾ.
ಹಳಿಯಾಳ ತಾಲೂಕು ತಾಲೂಕಾ ಮಟ್ಟದ ಪ್ರಥಮ ಸ್ಥಾನ:- ತಾಲೂಕಿನ ಕಾಳಗಿನಕೊಪ್ಪದ ವೃಂದಾ ಶಂಕರ ಸುತಾರ, ಬಾಣಸಗೇರಿ ಮೊರಾರ್ಜಿ ವಸತಿ ಶಾಲೆಯ ಮಂದಾರ ಎಸ್. ಶಿಂಬ್ರಿ ಹಾಗೂ ದಾಂಡೇಲಿಯ ಮೋಹನ ಆರ್. ಹೆಗಡೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆಂದು ಪ್ರತಿಷ್ಠಾನದ ಅಪ್ಪಾರಾವ ಪೂಜಾರಿ ಮಾಹಿತಿ ನೀಡಿದ್ದಾರೆ.
Leave a Comment