ಹಳಿಯಾಳ:- ದೇಶದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ನೆಲೆ ಇಲ್ಲವಾಗಿದೆ. ಎಲ್ಲೂ ಸಲ್ಲದ ಕೆಲವರ ಜೊತೆ ರಾಹುಲ್ ಗಾಂಧಿ ಕಾಣಿಸಿಕೊಳ್ಳುತ್ತಿದ್ದಾರೆ ಬಿಟ್ಟರೇ ಕಾಂಗ್ರೇಸ್ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವ್ಯಂಗ್ಯವಾಡಿದರು.
ಪಟ್ಟಣದ ಚೌಹಾನ್ ಪ್ಲಾಟ್, ದೇಸಾಯಿ ಗಲ್ಲಿಯಲ್ಲಿ ಪ್ರಚಾರ ಸಭೆಯ ಬಳಿಕ ಪಟ್ಟಣದ ಗಣೇಶ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ದೇವೆಗೌಡರು ತೊಡಿರುವ ಖೇಡ್ಡಾಕ್ಕು ಕಾಂಗ್ರೇಸ್ ಪಕ್ಷ ಬಿದ್ದಾಗಿದ್ದು ಕಾಂಗ್ರೇಸ್ ಹೆಸರಿಲ್ಲದಂತಾಗುವುದು ಖಚಿತ ಎಂದರು.
ಉತ್ತರ ಕನ್ನಡ ಜಿಲ್ಲೆ ಕಾಂಗ್ರೇಸ್ ಮುಕ್ತವಾಗಿದೆ. ಕಾಂಗ್ರೇಸ್ ಮುಕ್ತ ಚುನಾವಣೆ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ನಡೆಯಲಿದೆ. ಕಾಂಗ್ರೇಸ್ ಪಕ್ಷದವರಿಗೆ ಅವರ ಎದುರಿಗೆ ಮತದಾನ ಮಾಡಲು ಪಕ್ಷದ ಚಿಹ್ನೆಯು ಇಲ್ಲವಾಗಿದ್ದು ಭಸ್ಮಾಸುರನ ಕೈ ಮಾಯವಾಗಿದೆ ಎಂದು ಲೇವಡಿ ಮಾಡಿದ ಹೆಗಡೆ ಸಚಿವ ದೇಶಪಾಂಡೆ ಅವರು ಕೂಡ ಬಿಜೆಪಿಗೆ ಮತ ಹಾಕಲಿದ್ದಾರೆಂದು ಹಾಸ್ಯ ಚಟಾಕಿ ಹಾರಿಸಿದರು.
ಈ ಬಾರಿಯದ್ದು ಸುಲಭ ಚುನಾವಣೆಯಲ್ಲ ಜೆಡಿಎಸ್ ಅಭ್ಯರ್ಥಿಗೆ ಒಂದು ಮತ ಬಿಳದಂತೆ ಕಾರ್ಯಕರ್ತರು ಶ್ರಮವಹಿಸಿ ಬಿಜೆಪಿ ಗೇಲುವು ಒನ್ ವೇ ಆಗುವಂತೆ ಮಾಡಬೇಕೆಂದು ಕರೆ ನೀಡಿದರು. ಕಾರ್ಯಕರ್ತರೇ ನಮ್ಮ ನಾಯಕರು ಎಂದ ಹೆಗಡೆ ಜನರು ಮುಂದೆ ಹೊಗಿದ್ದಾರೆ ಅವರಿಗಿಂತ ಕಾರ್ಯಕರ್ತರು ಮುಂದೆ ಇರಬೇಕೆಂದರು.
ಕೇಂದ್ರ ಸರ್ಕಾರ ನೀಡಿರುವ ಹಲವಾರು ಯೋಜನೆಗಳ ಬಗ್ಗೆ ಮಾತನಾಡಿದ ಅವರು ಹಿಂದಿನ ಕಾಂಗ್ರೇಸ್ ಸರ್ಕಾರಗಳಲ್ಲಿ ನಡೆದ ಹಾಗೆ ಮೋದಿಯವರ ಆಡಳಿತದಲ್ಲಿ ಎಲ್ಲಿಯಾದರೂ ಕಮಿಷನ್ ವ್ಯವಹಾರಗಳು ನಡೆದಿವೇ ಎಂದು ಜನ ಅರ್ಥ ಮಾಡಿಕೊಳ್ಳಬೇಕು. ನಾನು ತಿನ್ನುವುದಿಲ್ಲ ಬೆರೆಯವರಿಗೂ ತಿನ್ನಲು ಬಿಡುವುದಿಲ್ಲ ಎಂಬ ಮೊದಿಜಿಯವರ ದಕ್ಷ, ಪ್ರಾಮಾಣಿಕ ಆಡಳಿತ ದೇಶವನ್ನು ಕ್ಷಿಪ್ರ ಅಭಿವೃದ್ದಿ ಪಥದಲ್ಲಿ ಕೊಂಡೊಯ್ದಿದೆ ಎಂದರು. ನಾವು ಸತ್ಯ ಹೆಳ್ತೆವೆ, ರಾಜಿ ಆಗಲ್ಲಾ, ಚುನಾವಣಾ ಗಿಮಿಕ್ ಮಾಡಲ್ಲ- ಹೇಳಿದ್ದನ್ನು ಮಾಡಿ ತೊರಿಸುತ್ತೇವೆ ಹಾಗೂ ಗುರಿ ಇಟ್ಟುಕೊಂಡು ನಡೆಯುತ್ತೇವೆಂದರು.
ಕ್ರಾಂತಿಕಾರಿಗಳು ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟಿದ್ದಾರೆ ವಿನಃ ಕಾಂಗ್ರೇಸ್ ಪಕ್ಷವಲ್ಲ. ದೇಶದ ವಿಭಜನೆಗೆ ಹಾಗೂ ಪಾಕಿಸ್ತಾನ ದೇಶ ನಿರ್ಮಾಣಕ್ಕೆ ಕಾಂಗ್ರೇಸ್ ಕಾರಣ ಎಂದು ಆರೋಪಿಸಿದರು.
2014 ಚುನಾವಣೆ ಬಳಿಕ ಮೊದಿಜಿಯವರು ದೇಶದ ಅಂತರಾತ್ಮ ಮತ್ತು ಆಸ್ಮಿತೆಯನ್ನು ಬಡಿದೆಬ್ಬಿಸುವ ಕಾರ್ಯವನ್ನು ಮಾಡಿದ್ದು ಇಂದು ದೇಶದ ಆತ್ಮವಿಶ್ವಾಸ ಜಾಸ್ತಿಯಾಗಿದೆ. ಈ ಮೊದಲು ಜಾತಿ-ವ್ಯಕ್ತಿ-ಪಕ್ಷ-ಹಣ ಈ 4 ಅಂಶಗಳನ್ನು ತೂಗಿ ಮತದಾರ ಮತ ಚಲಾಯಿಸುತ್ತಿದ್ದ ಆದರೇ ಈಗ ದೇಶದ ಚಿತ್ರಣ ಬದಲಾಗಿದೆ. ದೇಶಕ್ಕಾಗಿ ಇಂದು ಜನ ಮತ ಚಲಾಯಿಸುತ್ತಿದ್ದಾರೆಂದರು.
ಮುಂದೆ ದೇಶದಲ್ಲಿ ಹಿಂದೂತ್ವದ್ದೆ ರಾಜಕಾರಣ ನಡೆಯಬೇಕು. ಈ ಮಾತನ್ನು ಯಾವ ಸಂಕೋಚ ಇಲ್ಲದೇ ಹೇಳುತ್ತಿದ್ದೇನೆ. ಸ್ಪಷ್ಟ ಅರಿವು ಹಾಗೂ ಗುರಿ ಹೊಂದಿ ನಾವು ಸುಭದ್ರ ವಿಶ್ವ ಭಾರತಕ್ಕಾಗಿ ಶ್ರಮಿಸುತ್ತಿದ್ದೇವೆಂದರು.
ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ ಕಾಂಗ್ರೇಸ್ ಪಕ್ಷದವರು ಜಾತ್ಯಾತಿತ ಎನ್ನುತ್ತಲೇ ಜಾತಿ ಜಾತಿಗಳ, ಧರ್ಮ ಧರ್ಮಗಳ ಮಧ್ಯೆ ಒಡೆದು ಆಳುತ್ತ ದೇಶವನ್ನು 70 ವರ್ಷ ಆಳಿಯು ಅಭಿವೃದ್ದಿ ಪಡಿಸಲು ಸಾಧ್ಯವಾಗಿಲ್ಲ ಎಂದು ಕಿಡಿಕಾರಿದ ಅವರು ಚುನಾವಣೆಯಲ್ಲಿ ಮತ ಕೇಳುವ ಯಾವ ನೈತಿಕತೆಯನ್ನು ಕಾಂಗ್ರೇಸ್ ಹೊಂದಿಲ್ಲ ಎಂದರು.
ದೇಶದಲ್ಲಿ ಸೈನ್ಯಕ್ಕೆ ಶಕ್ತಿ ತುಂಬು ಕಾರ್ಯವನ್ನು ಮೋದಿ ಸರ್ಕಾರ ಮಾಡಿದೆ. ನಮ್ಮ ಸುರಕ್ಷತೆ, ಭದ್ರತೆ-ದೇಶದ ಭದ್ರತೆಗಾಗಿ ಮತ ಚಲಾಯಿಸಬೇಕಿದ ಎಂದ ಸುನೀಲ್ ಅಬ್ ಕಿ ಬಾರ್ ಫಿರ್ ಮೋದಿ ಸರ್ಕಾರ ಹಾಗೂ ಮತ್ತೊಮ್ಮೆ ಮೊದಿ, ಮತ್ತೊಮ್ಮೆ ಅನಂತಕುಮಾರ ಹೆಗಡೆ ಘೋಷಣೆಯೊಂದಿಗೆ ಚುನಾವಣೆ ಎದುರಿಸೊಣ ಎಂದರು.
ವೇದಿಕೆಯ ಮೇಲೆ ಬಿಜೆಪಿ ಮುಖಂಡರಾದ ಶಿವಾಜಿ ನರಸಾನಿ, ಮಂಗೇಶ ದೇಶಪಾಂಡೆ, ಅನಿಲ ಮುತ್ನಾಳ್, ಜಯಲಕ್ಷ್ಮೀ ಚವ್ವಾಣ ಮೊದಲಾದವರು ಇದ್ದರು.
Leave a Comment