ಹಳಿಯಾಳ:- ಸ್ವಾತಂತ್ರ್ಯ ಯೋಧ ಭಗತಸಿಂಗ್, ಸುಖದೇವ, ರಾಜಗುರು ಇವರ ಬಲಿದಾನದ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ಹಳಿಯಾಳದ ಯುವಶಕ್ತಿ ಸೇವಾ ಸಂಘವು ‘ರಕ್ತದಾನಿಗಳು ಜೀವ ರಕ್ಷಕರು’, ನಿಮ್ಮ 5 ನಿಮಿಷದ ಸಮಯ ಇನ್ನೊಬ್ಬರ ಜೀವಿತಾವಧಿಯಾಗಿರುತ್ತದೆ’ ಎಂಬ ಧ್ಯೇಯವಾಕ್ಯದೊಂದಿಗೆ ಶನಿವಾರ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ 75 ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ ಎಂದು ಯುವ ಶಕ್ತಿ ಸೇವಾ ಸಂಘದ ಅಧ್ಯಕ್ಷ ಪ್ರಕಾಶ ಕೊಣಪ್ಪನವರ ತಿಳಿಸಿದರು.
ಪಟ್ಟಣದ ಜವಾಹರ ರಸ್ತೆಯಲ್ಲಿರುವ ಡಾ|| ಶ್ರವಣ ಸೊಲ್ಲಾಪುರಿ ಆಸ್ಪತ್ರೆ ಆವರಣದಲ್ಲಿ ಯುವಶಕ್ತಿ ಸೇವಾ ಸಂಘ ಹಳಿಯಾಳ, ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್ ಹುಬ್ಬಳ್ಳಿ ಹಾಗೂ ಸಿವಿಲ್ ಆಸ್ಪತ್ರೆ, ಧಾರವಾಡ ಇವರ ಸಹಯೋಗದಲ್ಲಿ ನಡೆದ ಸ್ವಯಂಪ್ರೇರಿತ ಈ ರಕ್ತದಾನ ಶಿಬಿರವನ್ನು ಮಾಜಿ ಯೋಧರು ದೀಪ ಬೆಳಗಿಸುವ ಮೂಲಕ ಉಧ್ಘಾಟಿಸಿದರು.
ಈ ರಕ್ತದಾನ ಶಿಬಿರಕ್ಕೂ ಮುನ್ನ ಮಾಜಿ ಯೋಧರಾದ ಸುರೇಶ ಶಿವಣ್ಣವರ, ವಿಶ್ವನಾಥ ಬೇಣಚಿಕರ, ಅಶೋಕ ಮಿರಾಶಿ, ದಿ.ಮಾರುತಿ ಪಾಟೀಲ್ ಪತ್ನಿ ರೇಷ್ಮಾ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ ಕೊಣಪ್ಪನವರ ಸತತ 8 ವರ್ಷಗಳಿಂದ ದೇಶಕ್ಕಾಗಿ ಬಲಿದಾನಗೈದ ಕ್ರಾಂತಿವೀರ ದೇಶಭಕ್ತರ ಸವಿ ನೆನಪಿಗಾಗಿ ಅವರ ಬಲಿದಾನದ ದಿನ ದಿ.23 ರಂದು ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಸಾರ್ವಜನೀಕರಿಂದ ಉತ್ತಮ ಪ್ರತಿಕ್ರಿಯೇ ವ್ಯಕ್ತವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಉದಯ ಹೂಲಿ, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ವಿಲಾಸ ಕಣಗಲಿ, ಮುಖಂಡರಾದ ರಾಜು ಧೂಳಿ, ವಿನಾಯಕ ಶಿಂಧೆ, ಪ್ರಸಾದ ಹುನ್ಸವಾಡಕರ, ರಾಕೇಶ, ಶರತ, ಆನಂದ, ಅರುಣ, ಹನುಮಂತ, ಅಮೋಘ, ರಾಜು ಹಳ್ಳುಕರ ಮೊದಲಾದವರು ಇದ್ದರು.
Leave a Comment