ಹೊನ್ನಾವರ:
ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಪೊಲೀಸ್ ಪಥಸಂಚಲನ ಹೊನ್ನಾವರ ಪೋಲಿಸ್ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಗಳು ಪಟ್ಟಣದ ಶರಾವತಿ ಸರ್ಕಲನಿಂದ ಹೊರಟು ಬಸ್ಸ್ಟಾಂಡ್ ಮೂಲಕ ಬಜಾರ ರಸ್ತೆ, ಹೂವಿನ ಚೌಕ, ಮಾಸ್ತಿಕಟ್ಟಾ, ಸೇರಿದಂತಡ ಪಟ್ಟಣದ ವಿವಿಧಡೆಗಳಲ್ಲಿ ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು.
ನಂತರ ಪತ್ರಿಕೆಯ ಪ್ರತಿನಿಧಿಯೊಂದಿಗೆ ಮಾತನಾಡಿ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಶಾಂತಿ ಸುವ್ಯವಸ್ಥೆ ಪೋಲಿಸ್ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದ್ದು ಸಾರ್ವಜನಿಕರು ಯಾವುದೇ ರೀತಿಯಲ್ಲಿ ಭಯ ಪಡದೇ ಮತದಾನ ಮಾಡುವಂತೆ ಹೇಳಿದರು. ಅನುಮಾನಸ್ಪದ ವ್ಯಕ್ತಿಗಳು, ಅಥವಾ ವಸ್ತುಗಳು ಕಂಡು ಬಂದಲ್ಲಿ ಪೋಲಿಸ್ ಇಲಾಖೆ ಮಾಹಿತಿ ನೀಡುವಂತೆ ವಿನಂತಿಸಿದರು.
ಸಿ.ಪಿ.ಐ ಚೆಲವರಾಜ ಬಿ, ಪಿ.ಎಸ್.ಐ ತೇಜಸ್ವಿ, ಮತ್ತು ಎಲ್ಲಾ ಪೊಲೀಸ್ ಸಿಬ್ಬಂದಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.
Leave a Comment