ಹೊನ್ನಾವರ ಜೂ. 26 : ದೈಹಿಕ ಅಸಹಾಕರವನ್ನು ಮೆಟ್ಟಿ ನಿಂತು ಬೌದ್ಧಿಕ ಸಾಮಥ್ರ್ಯದಲ್ಲಿ ಮೆಟ್ಟಿಲೇರುತ್ತ ಚೆಸ್ ಪಟುವಾಗಿ ಬೆಳೆದ ಸಮರ್ಥ ಜಗದೀಶ ರಾವ್ ಅಮೇರಿಕಾ ಹಾಗೂ ಸ್ಲೋವಾಕಿಯಾದಲ್ಲಿ ನಡೆಯುವ 2ನೇ ವಿಶ್ವಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದು ತಂದೆ ಜಗದೀಶ ರಾವ್ ಮಗನನ್ನು ಕರೆದೊಯ್ದಿದ್ದಾರೆ.
ದಿ. 28ರಿಂದ ಜುಲೈ 6ರವರೆಗೆ ಸ್ಲೋವಾಕಿಯಾದಲ್ಲಿ ನಡೆಯುವ ಐಪಿಸಿಎ ವಿಶ್ವಮಟ್ಟದ ಚದುರಂಗ ಸ್ಪರ್ಧೆ ಹಾಗೂ ದಿ. 9-7-2019ರಿಂದ 14-7-2019ರವರೆಗೆ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆಯುವ ವಿಶ್ವಮಟ್ಟದ ಕಿರಿಯ ವಿಕಲಚೇತನರ ಚದುರಂಗ ಸ್ಪರ್ಧೆಯಲ್ಲಿ ಸಮರ್ಥ ಭಾಗವಹಿಸಲಿದ್ದಾನೆ. ಬಾಲ್ಯದಿಂದಲೇ ದೇಹದ ಒಂದೊಂದು ಅಂಗಗಳು ಅಸಹಕಾರ ಮಾಡುವ ಕಾಯಿಲೆಯಿಂದ ಬಳಲುತ್ತಿರುವ ಸಮರ್ಥ ಚೆಸ್ ಆಟದಲ್ಲಿ ತನ್ನ ಸಾಮಥ್ರ್ಯವನ್ನು ಗುರುತಿಸಿಕೊಂಡು ಬೆಳೆದಿದ್ದಾನೆ. ಕಾಲೇಜು 2ನೇ ವರ್ಷದಲ್ಲಿರುವ ಸಮರ್ಥ ಓದುವುದರಲ್ಲೂ ಸಾಮಥ್ರ್ಯ ತೋರಿದ್ದಾನೆ. ತಾಲೂಕಾ ಮಟ್ಟದಿಂದ ಆರಂಭಿಸಿ 2ಬಾರಿ ಅಂತರಾಷ್ಟ್ರೀಯ ಮಟ್ಟದವರೆಗಿನ ಹಲವು ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪದಕ ಪಡೆದಿದ್ದಾನೆ.
ಮಗನಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸಿಂಡಿಕೇಟ್ ಬ್ಯಾಂಕ ಉದ್ಯೋಗಿಯಾಗಿರುವ ಜಗದೀಶ ರಾವ್ ತನ್ನ ಬಡ್ತಿಯನ್ನು ಬಿಟ್ಟು ಮಗನಿಗೆ ನೈತಿಕ ಬೆಂಬಲ ಮತ್ತು ದೈಹಿಕ ಶಕ್ತಿಯಾಗಿ ನೆರಳಿನಂತೆ ಜೊತೆಗಿರುತ್ತಾರೆ. ತಂದೆ, ತಾಯಿ ಇಬ್ಬರೂ ಮಗನನ್ನು ನಿರ್ಲಕ್ಷಿಸದೆ ಇರುವ ಸಾಮಥ್ರ್ಯವನ್ನೇ ಬಳಸಿ ಆತನ ಬೆಳವಣಿಗೆಗೆ ಸಮರ್ಪಿಸಿಕೊಂಡಿದ್ದಾರೆ. ಸಮರ್ಥನ ತಂಗಿ ಸಾನ್ವಿ ಉತ್ತಮ ನೃತ್ಯಗಾರ್ತಿ. ಜಗತ್ತಿನಲ್ಲಿ ಅದಿಲ್ಲ, ಇದಿಲ್ಲ ಎಂದು ಕೊರಗುವವರು, ನ್ಯೂನ್ಯತೆಯುಳ್ಳ ಮಕ್ಕಳನ್ನು ತಿರಸ್ಕರಿಸುವವರು, ಅವರ ದೈಹಿಕ, ಮಾನಸಿಕ ನ್ಯೂನ್ಯತೆಯನ್ನು ಮೀರಿ ಬೆಳೆಸದೆ, ಅದನ್ನೇ ಬಂಡವಾಳವಾಗಿ ಬಳಸಿ, ಅನುಕಂಪಗಳಿಸುವವರ ಮಧ್ಯೆ ಜಗದೀಶರಾವ್ ದಂಪತಿಗಳ ಮತ್ತು ಸಮರ್ಥನ ಸಾಹಸ, ಸಾಮಥ್ರ್ಯ ಮೆಚ್ಚಬೇಕಾದದ್ದು. ಇಂದು ಗೋವಾದಿಂದ ತಂದೆ ಜಗದೀಶ ರಾವ್ರೊಂದಿಗೆ ಸಮರ್ಥ ತೆರಳಿದ್ದು ಜುಲೈ 17ರಂದು ಮರಳಲಿರುವ ಅವರಿಗೆ ಗೆದ್ದು ಬನ್ನಿ ಎಂದು ಹೆಮ್ಮೆಯಿಂದ ಶುಭಕೋರೋಣ.
Leave a Comment