
ಜೋಯಿಡಾ ತಾಲೂಕಿನ ಕಾನೇರಿ ಬ್ರೀಡ್ಜ ಬಳಿ ಬಂದ ಬಾರಿ ಮಳೆಯಿಂದಾಗಿ ಗಟಾರ ತುಂಬಿ ಬ್ರೀಡ್ಜ ಮೇಲೆ ನೀರು ತುಂಬಿಕೊಮಡ ದೃಶ್ಯ ಕಂಡು ಬಂತು. ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ನೀರು ಉತ್ತಮವಾಗಿ ಹರಿಯುತ್ತಿದೆ, ಆದರೆ ಗಟಾರಗಳನ್ನು ಸರಿಪಡಿಸಬೇಕಾದ ಲೋಕೋಪಯೋಗಿ ಇಲಾಕೆ ಮತ್ತು ಇತರ ಸಂಭಂದ ಪಟ್ಟ ಇಲಾಕೆಗಳು ಮಾತ್ರ ಏನು ಕ್ರಮ ಕೈಗೊಳ್ಳದೇ ಇರುವುದು ವಾಹನ ಸವಾರರಿಗೆ ತೊಂದರೆಗಿಡು ಮಾಡಿದೆ.
ತಾಲೂಕಿನ ಹಲವಾರು ಕಡೆಗಳಲ್ಲಿ ಗಟಾರ ಸ್ವಚ್ಚ ಮಾಡಿಯೇ ಇಲ್ಲ, ಇದರಿಂದಾಗಿ ಮಳೆಗಾಲದಲ್ಲಿ ಈ ಪರಿಸ್ಥಿತಿ ಉಂಟಾಗುತ್ತಿದೆ, ಪ್ರತಿ ವರ್ಷ ಇದೇ ರೀತಿಯಗುತ್ತಿದ್ದು , ಗಟಾರ ಸರಿಪಡಿಸಲು ಬಂದ ಹಣ ನೀರಲ್ಲಿಯೇ ಹರಿದು ಹೋಗುತ್ತಿದೆಯೇ ಎಂಬುದು ಜನಸಾಮಾನ್ಯರ ಪ್ರಶ್ನೆಯಾಗಿದೆ.
Leave a Comment