
ಜೋಯಿಡಾ –
ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯದಲ್ಲೂ ಕೂಡಾ ಹೊಸ ಟ್ರಾಪಿಕ್ ನಿಯಮದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ, ವಾಹನಕ್ಕೆ ಪೆಟ್ರೋಲ್ ಹಾಕಲು ಹಣ ಇಲ್ಲದ ಜನರು ಈಗ ಹೊಸ ಟ್ರಾಪಿಕ್ ರೂಲ್ಸಗಳಿಂದ ಕಂಗೆಟ್ಟಿದ್ದಾರೆ, ಒಂದು ಸಾವಿರದಿಂದ ಹತ್ತು ಸಾವಿರದ ವರೆಗೆ ದಂಡ ವಿಧಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಜನರು ಚಿಮಾರಿ ಹಾಕುತ್ತಿದ್ದಾರೆ.
ಆದರೆ ಜೋಯಿಡಾದ ಪೋಲಿಸರು ಇಲ್ಲಿನ ಸರ್ಕಲ್ ಬಳಿ ತಮ್ಮ ಹೊಸ ಟ್ರಾಪಿಕ್ ರೂಲ್ಸಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ, ಹೆಲ್ಮಟ್ ಹಾಕದೆ ವಾಹನ ಚಲಾಯಿಸುವುದು ಅಪಾಯಕರ ಆದ್ದರಿಂದ ಕಡ್ಡಾಯವಾಗಿ ಬೈಕ್ ಸವಾರರು ಹೆಲ್ಮಟ್ ಧರಿಸಲೇ ಬೇಕು, ಹೆಲ್ಮಟ ಧರಿಸದೇ ವಾಹನ ಚಲಾಯಿಸಿದರೆ ದಂಡ ವಿಧಿಸುವುದು ಅನಿವಾರ್ಯವಾಗಿದೆ ಎಂದು ಜೋಯಿಡಾದ ಪಿ,ಎಸ್,ಐ , ರಾಜಶೇಖರ ಜನರಿಗೆ ತಿಳಿಸಿಕೊಟ್ಟರು.
ಜೋಯಿಡಾ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ಮತ್ತು ರಾಮನಗರ ಭಾಗದಲ್ಲಿಯು ಕಡ್ಡಾಯವಾಗಿ ಬೈಕ್ ಸವಾರರು ಹೆಲ್ಮಟ್ ಧರಿಸಿ ಎಂದು ಜೋಯಿಡಾದ ಸಿ.ಪಿ,ಐ, ರಮೇಶ ಹೂಗಾರ ಪ್ರತಿ ಹಳ್ಳಿಗಳಿಗೆ ಬೇಟಿಕೊಟ್ಟು ಜನರಿಗೆ ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಪೋಲಿಸ್ ಇಲಾಕೆಯ ಸಿಬ್ಬಂದಿಗಳಾದ ಪ್ರತಾಪ, ದರ್ಶನ, ರವಿ, ಇನ್ನೂಳಿದ ಸಿಬ್ಬಂದಿಗಳು ಉಪಸ್ಥಿತರಿದ್ದರು.
Leave a Comment