
ಹಳಿಯಾಳ:- ದಾಂಡೇಲಿ ನಗರದಿಂದ 5 ಕೀಮಿ ಅಂತರದಲ್ಲಿರುವ ಜೋಯಿಡಾ ತಾಲೂಕಿನ ವ್ಯಾಪ್ತಿಗೆ ಬರುವ ಮೌಳಂಗಿಯಲ್ಲಿರುವ “ಇಕೋ ಪಾರ್ಕ” ಹೆಸರು ಬದಲಾಯಿಸಿ ರಾಷ್ಟ್ರಪುರುಷ ಛತ್ರಪತಿ ಶಿವಾಜಿ ಮಹಾರಾಜರ ಪಾರ್ಕ ಎಂದು ಹೆಸರು ಇಡುವಂತೆ ಡಾ.ಬಿ.ಆರ್.ಅಂಬೇಡ್ಕರ್ ನವ ಯುವಕ ಮಂಡಳದವರು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರಿಗೆ ಮನವಿ ಸಲ್ಲಿಸುವುದರ ಮೂಲಕ ಆಗ್ರಹಿಸಿದ್ದಾರೆ.
ಮನವಿಯಲ್ಲಿ ಅರಣ್ಯ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿರುವ ಈ ಪಾರ್ಕಿಗೆ ಯಾವುದೋ ಒಂದು ಇಕೋ ಪಾರ್ಕ ಎಂದು ಹೆಸರಿಟ್ಟಿರುವುದು ಗ್ರಾಮಸ್ಥರಿಗೆ ಬೇಸರವಾಗಿದೆ. ಕಾರಣ ಹಿಂದೂ ರಾಷ್ಟ್ರ ಸ್ಥಾಪಕ, ಅಪ್ರತಿಮ ರಾಷ್ಟ್ರಭಕ್ತರಾಗಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು ಇಡಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ ಎಂದು ತಿಳಿಸಲಾಗಿದೆ.
ಮನವಿ ಸ್ವೀಕರಿಸಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ಗ್ರಾಮಸ್ಥರ ಆಲೋಚನೆ ಸರಿಯಾಗಿದೆ. ರಾಷ್ಟ್ರಪುರುಷರ ಹೆಸರು ಇಟ್ಟರೇ ತಪ್ಪೆನಿಲ್ಲ ಕಾರಣ ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಎಂದರು.
ಮನವಿ ಸಲ್ಲಿಸುವಾಗ ಮಹದೇವ ಕಾಂಬಳೆ, ಸಹದೇವ ಕಾಂಬ್ಳೆ, ಕಲ್ಲಪ್ಪಾ ಚಲವಾದಿ, ಶಿವಾನಂದ ಮಂಕಾಳೆ, ಯುವರಾಜ, ಗಜಾನನ, ಅನ್ನಪೂರ್ಣ ಕಾಂಬಳೆ ಇತರರು ಇದ್ದರು.

Leave a Comment