
ಹಳಿಯಾಳ :- ಪಟ್ಟಣದ ಮಂಜು ಸ್ಕೂಲ್ ಆಫ್ ಒಕಿನವಾ ಗೊಜು ರಿಯು ಕರಾಟೆ ಶಾಲೆಯ ವಿದ್ಯಾರ್ಥಿ ಸೆನ್ಸಾಯ ಶ್ರೇಯಸ್ ಹಿರೇಮಠ ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸಲು ಆಯ್ಕೆಯಾಗಿದ್ದಕ್ಕೆ ಶಾಲೆವತಿಯಿಂದ ಭಾವಿ ಸೈನಿಕನಿಗೆ ಸನ್ಮಾನಿಸಿ ಗೌರವಿಸುವ ವಿಶಿಷ್ಠ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ಕ್ಷೇತ್ರಶಿಕ್ಷಣಾಧಿಕಾರಿ ಸಮೀರ ಮುಲ್ಲಾ, ಸಿ.ಡಿ.ಪಿ.ಒ ಲಕ್ಷ್ಮೀದೇವಿ ಇತರ ಗಣ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಮತ್ತು ಗಿಡಕ್ಕೆ ನೀರೆರೆವುದರ ಮೂಲಕ ಮಾಡಿದರು.
ಬಳಿಕ ಮಾತನಾಡಿದ ತಹಶಿಲ್ದಾರ ವಿದ್ಯಾಧರ ಇದೊಂದು ವಿಶಿಷ್ಠ ಕಾರ್ಯಕ್ರಮವಾಗಿದ್ದು ದೇಶಸೇವೆ ಮಾಡುವುದು ಹೆಮ್ಮೆಯ ವಿಷಯವಾಗಿದೆ. ದೇಶಸೇವೆಗೆ ಮಂಜುರವರ ಕರಾಟೆ ಶಾಲೆಯಿಂದ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಆಯ್ಕೆಯಾಗಲಿ ಎಂದು ಶುಭ ಹಾರೈಸಿ ಶಾಲೆಯ ವ್ಯವಸ್ಥಾಪಕರು ಹಾಗೂ ತರಬೇತಿದಾರ ಮಂಜು ಅವರ ಸಮಾಜಮುಖಿ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಮುಲ್ಲಾ ಮಾತನಾಡುತ್ತಾ ಎಲ್ಲರಿಗೂ ದೇಶಸೇವೆಯ ಭಾಗ್ಯ ದೊರೆಯುವುದಿಲ್ಲಾ ಈ ಅವಕಾಶ ಪಡೆದ ಈ ವಿದ್ಯಾರ್ಥಿ ಇನ್ನೂ ಹೆಚ್ಚಿನ ಯಶಸ್ಸನ್ನು ಪಡೆಯಲಿ, ಈ ರೀತಿಯ ಸನ್ಮಾನಗಳಿಂದ ದೇಶಸೇವೆ ಮಾಡುವ ಸೈನಿಕರಿಗೆ ಗೌರವ ನೀಡಿದಂತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕರಾಟೆ ಶಾಲೆಯ ಮುಖ್ಯಸ್ಥ ಶಿಹಾನ ಮಂಜುನಾಥ ಮಾದಾರ ಮಾತನಾಡಿದರು. ಸನ್ಮಾನ ಕಾರ್ಯಕ್ರಮದಲ್ಲಿ ಉಪನೊಂದಣಾಧಿಕಾರಿ ನದಾಫ, ಕೆ.ಎಸ್.ಆರ್.ಟಿ.ಸಿ ಘಟಕ ವ್ಯವಸ್ಥಾಪಕ ಎಲ್.ಎಚ್.ರಾಠೋಡ, ರಾಜ್ಯ ಜಾನಪದ ಅಕಾಡೆಮಿ ಸದಸ್ಯ ಸಿದ್ದಪ್ಪಾ ಬಿರಾದಾರ, ಹಿರಿಯ ನಾಗರಿಕ ವೇದಿಕೆ ಜಿ.ಡಿಗಂಗಾಧರ, ವಾಸವಿ ಸಮಾಜದ ಅಶೋಕ.ಕಣಿಮೆಹಳ್ಳಿ, ಎಮ್.ಸಿ.ನಿಂಗನಗೌಡರ, ಪತ್ರಕರ್ತ ಯೋಗರಾಜ.ಎಸ್.ಕೆ, ಕರ್ನಾಟಕ ರಕ್ಷಣಾ ವೇದಿಕೆ ಬಸವರಾಜ ಬೆಂಡಿಗೇರಿ, ಜಯಕರ್ನಾಟಕ ವಿಲಾಸ ಕಣಗಲಿ, ಲಯನ್ಸ ಕ್ಲಬ್ ಎಮ್.ಆರ್,ಹಿರೇಮಠ ಇತರರು ಇದ್ದರು. ಕಾರ್ಯಕ್ರಮವನ್ನು ಸಂಜುಕುಮಾರ ಮಠಪತಿ ಮತ್ತು ಅಕ್ಷತಾ ಅಂಗ್ರೊಳ್ಳಿ ನಿರ್ವಹಿಸಿದರು.
Leave a Comment