
ಹೊನ್ನಾವರ : ಬರುವ ಜೂನ್ ತಿಂಗಳಿನಲ್ಲಿ ನಡೆಯಲಿರುವ ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರz Àಚುನಾವಣೆಯಲ್ಲಿ ಈ ಬಾರಿ ಕಾಂಗ್ರೇಸ್ ಅಭ್ಯರ್ಥಿ ಡಾ. ಕುಬೇರಪ್ಪನವರ ಗೆಲುವು ನಿಶ್ಚಿತ ಎಂದು À ಹೊನ್ನಾವರ ಬ್ಲಾಕ್ನ ಅಧ್ಯಕ್ಷ ಜಗದೀಪ ತೆಂಗೇರಿ ತಿಳಿಸಿದ್ದಾರೆ.
ಅವರು ಇಂದು ಕಾಂಗ್ರೇಸ್ ಪಕ್ಷದ ಕಛೇರಿಯಲ್ಲಿ ಪಕ್ಷದ ಅಭ್ಯರ್ಥಿ ಡಾ. ಕುಬೇರಪ್ಪ ಅವರ ಪರವಾಗಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ನಾಲ್ಕು ತಿಂಗಳ ಹಿಂದೆ ಈ ಕ್ಷೇತ್ರಕ್ಕೆ ಸಂಬಂಧಿಸಿದ ಚುನಾವಣಾ ಪ್ರಕ್ರಿಯೆಯ ಅಧಿಸೂಚನೆ ಹೊರಡಿಸದಾಗಿನಿಂದ ಇಲ್ಲಿಯವರೆಗೂ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಹಾಗೂ ನಮ್ಮ ಪಕ್ಷದ ತಳಮಟ್ಟದ ಕಾರ್ಯಕರ್ತರು ನಿರಂತರವಾಗಿ ಪದವೀಧರ ನೊಂದಣಿ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಹಳ ವ್ಯವಸ್ಥಿತನಾಗಿ ಪದವೀಧರರ ನೊಂದಣಿ ಹಾಗೂ ಶಾಲಾ, ಕಾಲೇಜುಗಳು, ಸೊಸೈಟಿಗಳು, ಬ್ಯಾಂಕುಗಳು, ಹಾಗೂ ಇತರ ಸಂಘ ಸಂಸ್ಥೆಗಳನ್ನು ಸಂಪರ್ಕಿಸಿ ಪ್ರಚಾರ ಕೈಗೊಳ್ಳಲಾಗಿದೆ. ಕಳೆದ ಎರಡು ದಿನಗಳಿಂದ ಹೊನ್ನಾವರ ತಾಲೂಕಿನ ಶಾಲಾ, ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳಲ್ಲಿನ ಮತದಾರರನ್ನು ಭೇಟಿಯಾಗಿ ಮತಯಾಚಿಸಿದ್ದು, ಮತದಾರರು ಅತ್ಯಂತ ಹುರುಪಿನಿಂದ ಈ ಬಾರಿ ಡಾ. ಕುಬೇರಪ್ಪನವರನ್ನು ಬೆಂಬಲಿಸುತ್ತಿರುವುದನ್ನು ಗಮನಿಸಿದರೆ ಅವರ ಹೆಲುವು ನಿಶ್ಚಿತವೆಂದು ಜಗದೀಪ ತೆಂಗೇರಿ ಪುನರುಚ್ಚರಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದ ಅಭ್ಯರ್ಥಿ ಡಾ. ಕುಬೇರಪ್ಪ ಮಾತನಾಡಿ, ನಾನು ಈ ಕ್ಷೇತ್ರಕ್ಕೆ ಹೊಸಬನಲ್ಲ. ಈಗಾಗಲೇ ಮೂರುಬಾರಿ ಶಿಕ್ಷಕರ ಕ್ಷೇತ್ರಕ್ಕೆ ಸ್ಪರ್ಥಿಸಿದು,್ದ ಕ್ಷೇತ್ರದ ಉದ್ದಗಲಕ್ಕೂ ಹಲವಾರು ಬಾರಿ ಸುತ್ತಾಡಿದ್ದು ಎಲ್ಲ ಮತದಾರರು ನನಗೆ ವೈಯಕ್ತಿPವಾಗಿ ನನಗೆ ಪರಿಚಯದವರಾಗಿದ್ದಾರೆ. ನನಗೆ ಅಧಿಕಾರವಿಲ್ಲದಿದ್ದರೂ ಉತ್ತರ ಕನ್ನಡ ಜಿಲ್ಲೆಯ ಅನೇಕ ಜನರಿಗೆ ಹಾಗೂ ಶಿಕ್ಷಕರಿಗೆ ನೂರಾರು ಕೆಲಸ ಮಾಡಿಸಿಕೊಟ್ಟಿದ್ದೇನೆ. ಹಾಗೂ ಇಡೀ ಸಮುದಾಯಕ್ಕೆ ಉಪಯೋಗವಾಗುವ ಹಲವಾರು ಕೆಲಸಗಳನ್ನು ಮಾಡಿದ್ದು ಮತದಾರರು ಇದನ್ನು ಗೌರವದಿಂದ ಸ್ಮರಣೆ ಮಾಡುತ್ತಿದ್ದಾರೆ. ಮತದಾರರನ್ನು ಭೇಟಿಯಾದಾಗ ಅವರ ತೃಪ್ತಿ ವ್ಯಕ್ತಪಡಿಸಿದ್ದು ಅವರೆಲ್ಲರ ಬೆಂಬಲ ನನಗೇ ಸಿಗುತ್ತಿದ್ದು ಈ ಬಾರಿ ನನ್ನ ಗೆಲುವು ನಿಶ್ಛಿತವೆಂದು ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಡಾ . ಕುಬೇರಪ್ಪ ಪದವೀಧರ Àಕ್ಷೇತ್ರಕ್ಕೂ ನನ್ನಂತ ಒಬ್ಬ ಅನುಭವೀ ಶಿಕ್ಷಕ ಆಯ್ಕೆಯಾಗುವುದರಿಂದ, ಶಿಕ್ಷಣ ಹಾಗೂ ಶಿಕ್ಷಕ ಕ್ಷೇತ್ರದ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಮತದಾರರಿಗೆ ಮೇಲಿಂದ ಮೇಲೆ ಸಂಪರ್ಕದಲ್ಲಿರುವ ವ್ಯಕ್ತಿ ನಾನಾಗಿರುವುದರಿಂದ ಈ ಬಾರಿ ಮತದಾರರು £ನ್ನ ಕೈ ಹಿಡಿಯಲಿದ್ದಾರೆಂದು ಡಾ. ಕುಬೇರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೇಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎಂ, ಎನ್ ಸುಬ್ರಹ್ಮಣ್ಯ, ತಾಲೂಕಾ ಕಾಂಗ್ರೇಸ್ ಇಂಟಕ್ ಅಧ್ಯಕ್ಷ ಆಗ್ನೇಲ್ ಡಯಾಸ್, ±ಕ್ತಿ ವಿಭಾಗದ ಬಾಲಚಂದ್ರ ನಾಯ್ಕ, ಕಾಂಗ್ರೇಸ್ ಪzವೀಧರ ವಿಬಾಗದ ಅಧ್ಯಕ್ಷ ಸುದರ್ಶನ ಹೊನ್ನಾವರ, ಅಲ್ಪಸಂಖ್ಯಾತ ಕಾಂಗ್ರೇಸ್ ವಿಭಾಗದ ಹನೀಪ್ ಶೇಖ್, ವಸಿಮ್ ಸಾಬ್, ಪಕ್ಷದ ಮುಖಂಡರಾದ ಬ್ರಾಜಿಲ್ ಪಿಂಟೊ, ಚಂದ್ರಶೇಖರ ಚಾರೋಡಿ, ನೆಲ್ಸನ್ ರೊಡ್ರೀಗಿಸ್, ಮಾದೇವ ನಾಯ್ಕ, ಸಾಲ್ವೋದರ ಡಿಸೋಜಾ, ಹೆನ್ರಿ ಲೀಮಾ, ರಾಜು ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.
Leave a Comment