
ಕುಮಟಾ ಪಟ್ಟಣದ ಶಾಂತಿಕಾ ಪರಮೇಶವ್ವರಿ ಸಭಾಭವನದಲ್ಲಿ ಭಾನುವಾರ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ,ಪ್ರಗತಿ ಭಂದು ಸ್ವಸಹಾಯ ಸಂಘಗಳ ಒಕ್ಕೂಟ ದೇವಗಿರಿ ವಲಯ ಹಾಗೂ ವಿವಿದ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜರುಗಿದ ಶ್ರೀ ಸಾಮೂಹಿಕ ಸತ್ಯನಾರಾಣ ಪೂಜಾ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಮಾಡಲಾಗದ ಕೆಲಸವನ್ನು ಧರ್ಮಸ್ಥಳ ಯೋಜನೆ ಯಾವುದೇ ಜಾತಿ, ಮತ, ಧರ್ಮದ ಬೇದಬಾವವಿಲ್ಲದೇ ಸಮಾಜದಲ್ಲಿ ಹಿಂದುಳಿದವರನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದರ ಜೊತೆಗೆ ತಮ್ಮ ಮನೆ ಬಾಗಿಲಿಗೆ ಬಂದು ಬ್ಯಾಂಕಿನಿಂದ ನೇರ ಸಾಲ ಸೌಲಬ್ಯವನ್ನು ನೀಡಿ ತಮ್ಮ ಬದುಕಿನ ದಿಕ್ಕನ್ನೇ ಬದಲಿಸುವ ಮೂಲಕ ಅಭಿವೃದ್ಧಿ ಹೊಂದಲು ಪ್ರೇರಣೆ ನೀಡುತ್ತಿರುವುದರಿಂದ ಇಂದು ರಾಜ್ಯದ ಸಹಸ್ರಾರು ಕುಟುಂಬಗಳಲ್ಲಿ ನವ ಚೈತನ್ಯ ಮೂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು ಈ ಯೋಜನೆಯ ಸಂಪೂರ್ಣ ಸದುಪಯೋಗ ಪಡೆದುಕೊಂಡು ಸ್ವಾವಲಂಬಿಯಾಗಿ ಬದುಕು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಉದ್ಯಮಿ ಹಾಗೂ ಚಲನಚಿತ್ರ ನಿರ್ಮಾಪಕರಾದ ಸುಬ್ರಾಯ ವಾಳ್ಕೆ ಮಾತನಾಡಿ ನಮಗೆ ಬೇಡಿದ್ದನ್ನು ನೀಡುವ ಕಣ್ಣಿಗೆ ಕಾಣದೇ ಇರುವವನೇ ದೇವರು ಎಂದು ನಾವು ನಂಬಿಕೊಂಡಿದ್ದು. ಆದರೆ ಇಂದು ನಾವು ಬೇಡಿದ್ದನ್ನು ನೀಡಿ ಕಣ್ಣಿಗೆ ಕಾಣುತ್ತಿರುವ ಅದೆಷ್ಟೋ ಸಂತರು ನಮ್ಮೊಂದಿಗೆ ಇದ್ದು, ಅವರುಗಳಲ್ಲಿ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಪೂಜ್ಯ ಹೆಗ್ಗಡೆಯವರು ನಮ್ಮೆಲ್ಲರ ನಿಜವಾದ ದೇವರು. ಈ ಯೋಜನೆಯಲ್ಲಿ ಹೇಗೆ ಯಾವುದೇ ಜಾತಿ ಧರ್ಮವಿಲ್ಲದೇ ಯಾವುದೇ ಅಂಜಿಕೆಯಿಲ್ಲದೇ ಸೇರಿಕೊಂಡಿದ್ದೀರೋ ಹಾಗೇ ಪೌರತ್ವ ತಿದ್ದುಪಡಿ ಕಾರ್ಯಕ್ರಮವೂ ಒಂದಾಗಿದ್ದು ಅದರಿಂದ ಯಾರು ಭಯಪಡಬೇಕಾಗಿಲ್ಲ “ಎಂದು ಈ ಬಗ್ಗೆ ಸಂಕ್ಷಿಪ್ತವಾಗಿ ವಿರಿಸಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಸಾಮೊಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಅದ್ಯಕ್ಷ ರವಿ ಗಾವಡಿ ವಹಿಸಿಕೊಂಡಿದ್ದರು. ತಾಲೂಕಿನ ಯೋಜನಾಧಿಕಾರಿ ನಾಗರಾಜ ನಾಯ್ಕ ಸ್ವಾಗತಿಸಿದರು. ಮೇಲ್ವಿಚಾರಕ ಯಧುನಂದನ ನಾಯ್ಕ ವಂದಿಸಿದರು. ಶಿಕ್ಷಕರಾದ ಮಂಜುನಾದ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯಲ್ಲಿ ಪೋಲೀಸ್ ವೃತ್ತ ನಿರಕ್ಷಕರಾದ ಪರಮೇಶ್ವರ ಗುನಗ, ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಮೊಕ್ತೇಸರರಾದ ಕೃಷ್ಣ ಬಾಬ ಪೈ, ಪುರಸಭಾ ಸದಸ್ಯೆ ಪಲ್ಲವಿ ಮಡಿವಾಳ, ಒಕ್ಕೂಟದ ಪದಾಧಿಕಾರಿಗಳು,ಸೇವಾಪ್ರತಿನಿಧಿಗಳು ಇನ್ನಿತರರು ಉಪಸ್ಥಿತರಿದ್ದರು.


Leave a Comment